ಪತ್ನಿ ಸ್ಪಂದನಾ ನೆನಪಲ್ಲಿ ವಿಜಯ್ ರಾಘವೇಂದ್ರ ಅವರು ಗೀತ ಸ್ಪಂದನ ಕಾರ್ಯಕ್ರಮದಲ್ಲಿ ಹಾಲಲ್ಲಾದರು ಹಾಕು ನೀರಲ್ಲದರು ಹಾಕು ಎಂದು ಭಾವ ಪರವಶರಾಗಿ ಹಾಡು ಹೇಳಿದ್ದಾರೆ. 2007ರ ಆಗಸ್ಟ್ 26ರಂದು ನಟ ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ಅದ್ದೂರಿ ಮದುವೆ ನಡೆದಿತ್ತು. ಮೊದಲೇ ಈ ಜೋಡಿಯದ್ದು ಲವ್ ಮ್ಯಾರೇಜ್. ಆ ಪ್ರೀತಿ ತುಸು ಜಾಸ್ತಿಯೇ.
ಇದೀಗ ಆ ಪ್ರೀತಿಯೇ ಜತೆಗಿಲ್ಲದ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ ವಿಜಯ್ ರಾಘವೇಂದ್ರ. ಮಡುಗಟ್ಟಿದ ನೋವಿನಲ್ಲಿಯೇ ಪತ್ನಿಯನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡಿದ್ದಾರೆ.
ಪತ್ನಿಯನ್ನು ನೆನೆಪಿಸಿಕೊಂಡು, ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ, ಎಲ್ಲೆ ಮೀರಿ ಒಲವ ನೀಡಿದೆ ಎದೆಯ ಅಂತರಾಳದಲಿ, ಬದುಕನ್ನು ಕಟ್ಟಿ ಸರ್ವಸ್ವವಾದೆ, ಉಸಿರಲ್ಲಿ ಬೆರೆತು ಜೀವಂತವಾದೆ, ಮುದ್ದಾದ ನಗುವಿನಲ್ಲಿದ್ದಿದ್ದ ಶಕ್ತಿ ಪರ್ವತದಷ್ಟು, ಮರೆಯದೆ.
ತೊರೆಯದೆ ಎದೆಗೊತ್ತಿ ಪ್ರೀತಿಸುವೆ, ಶೌರ್ಯನಲ್ಲಿ ನಾನಿನ್ನ ಬಿಗಿದಪ್ಪುವಷ್ಟು.. ಎಂದು ತಮ್ಮ ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.
ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪತ್ನಿ ಸ್ಪಂದನಾ ಇಲ್ಲವಾಗಿ ಮೂರುವಾರಗಳಾಗುತ್ತ ಬಂದವು. ಇಂದಿಗೂ ಪತ್ನಿಯ ನೆನಪಿನಲ್ಲಿಯೇ ಇದ್ದಾರೆ ನಟ ವಿಜಯ್ ರಾಘವೇಂದ್ರ. ಅವರ ಅನುಪಸ್ಥಿತಿಯಲ್ಲಿಯೇ ವಿವಾಹ ವಾರ್ಷಿಕೋತ್ಸವದ ಪೋಸ್ಟ್ ಹಂಚಿಕೊಂಡು ಮತ್ತೆ ಅವರನ್ನು ನೆನಪು ಮಾಡಿಕೊಂಡಿದ್ದರು ವಿಜಯ್.
ಇದೀಗ ಆ ನೋವಿನಲ್ಲೇ ಸಿನಿಮಾ ನಿರ್ಮಾಪಕರಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಸಿನಿಮಾ ಪ್ರಚಾರಕ್ಕೂ ಆಗಮಿಸಿದ್ದರು. ಅದರಂತೆ ವಿಜಯ್ ರಾಘವೇಂದ್ರ ಅವ್ರು ಇತ್ತೀಚಿಗೆ ನಡೆದ ಗೀತ ಸ್ಪಂದನ ಕಾರ್ಯಕ್ರಮ ದಲ್ಲಿ ಮುದ್ದಿನ ಹೆಂಡತಿಯ ನೆನೆದು ಕಣ್ಣೀರಿಟ್ಟಿದ್ದಾರೆ.