ಕೈ ಕಾಲು ನಿಶಕ್ತಿ ಮತ್ತು ನಡುಗುವಿಕೆಗೆ ಮನೆಮದ್ದು.ಕರ್ನಾಟಕದಲ್ಲಿ 18 ಸಿದ್ದರುಗಳು ಇದ್ದಾರೆ, ಅವರುಗಳು ಕೊಟ್ಟಿರುವಂತಹ ಔಷಧಿಗಳು ಸಿದ್ಧ ಔಷಧಿ. ಅದರಲ್ಲಿಯೂ ಒಬ್ಬರು ರಾಮದೇವರು ಇವರು ಭಾರತದವರು. ಇವರ ಸ್ವಲ್ಪ ದಿನದ ಹಿಂದೆ ಬೇರೆ ದೇಶಗಳಿಗೆ ಹೋಗುತ್ತಾರೆ ಅಲ್ಲಿ ಇರುವಂತಹ ಗಿಡಮೂಲಿಕೆಗಳನ್ನು ಕಲಿತುಕೊಂಡು ಭಾರತಕ್ಕೆ ಬರುವಂತಹ ಸಂದರ್ಭದಲ್ಲಿ ಅವರ ಹೆಸರು ಹೋಗುವಾಗ ರಾಮದೇವರು ಎಂದು ಇದ್ದ ಹೆಸರು ಬರುವ ಸಂದರ್ಭದಲ್ಲಿ ಯಾಕುಬ್ ಎಂದು ಬದಲಾಗಿರುತ್ತದೆ. ಅಲ್ಲಿ ಬದಲಾವಣೆಯಾದಂತಹ ಕಾರಣದಿಂದ ಔಷಧಿಗಳನ್ನು ಗುಣಪಡಿಸಿ,
ಔಷಧಿಗಳಿಂದ ತಯಾರಾದಂತಹ ಔಷಧಿಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಸಿದ್ಧಿಯಾಗುತ್ತದೆ ಅವರಿಗೆ ಹೆಸರನ್ನು ಕೊಟ್ಟು ಯಾಕುಬ್ ಎಂದು ಕಳುಹಿಸುತ್ತಾರೆ.ಕೈಕಾಲುಗಳು ನಡುಗುತ್ತಿದ್ದರೆ, ಇದಕ್ಕೆ ಮೂಲ ಕಾರಣ ಏನು ಎಂದರೆ ಮೊದಲನೆಯದಾಗಿ ಮಲಬದ್ಧತೆ. ಎರಡನೆಯದು ಕಿಡ್ನಿ ವೀಕ್ ಆಗಿರುವಂತದ್ದು. ಮೂರನೆಯದು ಭಯ. ಹಾಗೆ ಕುಡಿಯುತ್ತಿರುವವರಿಗೆ ಮತ್ತು ನಿದ್ದೆ ಇಲ್ಲದಿರುವಂಥವರು ಇವರೆಲ್ಲರಿಗೂ ಸಹ ಕೈಕಾಲುಗಳು ನಡುಗುತ್ತಿರುತ್ತದೆ ಅಂತವರಿಗೆ. ಪರಿಹಾರ ಆಗಬೇಕು ಎಂದರೆ ಇದೆಲ್ಲದಕ್ಕೂ ಉತ್ತರ ಏನು ಎಂದರೆ ಬಿಳಿ ಆಡಿನ ತುಪ್ಪ ಸೇವನೆ ಮಾಡಿದರೆ ನಿಮಗೆ ಪರಿಹಾರ ಸಿಗುತ್ತದೆ. ಆಡು ಎಲ್ಲಾ ರೀತಿಯ ಸೊಪ್ಪುಗಳನ್ನು ಸೇವನೆ ಮಾಡುವುದರಿಂದ.
ಹಾಗೆಯೇ ಬಿಳಿ ಆಡಿನಲ್ಲಿ ಸಸ್ಯಾಹಾರದ ಕೊಬ್ಬಿನ ಅಂಶ ಅಧಿಕವಾಗಿರುತ್ತದೆ. ಉದಾಹರಣೆ ಏನೆoದರೆ ಹಾಲು ಹೆಚ್ಚಾಗಿ ಶೇಖರಣೆಯಾಗಿ ಅದು ಕೊಬ್ಬಾಗಿ ಪರಿವರ್ತನೆಯಾಗುತ್ತದೆ ಆ ಕೊಬ್ಬಿನಲ್ಲಿ ಔಷಧಿಯನ್ನು ಮಾಡಬಹುದು. ಕೊಬ್ಬನ್ನು 300 ಗ್ರಾಂ ತೆಗೆದುಕೊಂಡು, 60 ಗ್ರಾಂ ತಿಪಿಲಿ, 60 ಗ್ರಾಂ ಮೆಣಸು, 60 ಗ್ರಾಂ ಒಣ ಶುಂಠಿ, 60 ಗ್ರಾಂ ಬೆಳ್ಳುಳ್ಳಿ. 60 ಗ್ರಾಂ ಪರಂಗಿಪಟ್ಟೆ ಚೂರ್ಣ ಇಷ್ಟನ್ನು ತೆಗೆದುಕೊಂಡು.
ಮೊದಲನೆಯದಾಗಿ ಒಂದು ಒನಕೆಯನ್ನು ತೆಗೆದುಕೊಂಡು ಸ್ವಲ್ಪ ಕೊಬ್ಬನ್ನು ಹಾಕಿ ಅದಕ್ಕೆ ಮೊದಲು ತಿಪಿಲಿ ಹಾಕಿ ಕುಟ್ಟ ಬೇಕು, ನಂತರ ಸ್ವಲ್ಪ ಕೊಬ್ಬನ್ನು ಹಾಕಿ ಮೆಣಸನ್ನು ಹಾಕಿ ಕುಟ್ಟಬೇಕು, ಮತ್ತೆ ಕೊಬ್ಬನ್ನು ಹಾಕಿ ಒಣ ಶುಂಠಿ ಹಾಕಿ ಕುಟ್ಟಬೇಕು, ಹೀಗೆ ಎಲ್ಲವನ್ನೂ ಹಾಕಿ ಕುಟ್ಟಿದ ನಂತರ ಅದು ಒಂದು ಪೇಸ್ಟ್ ಹದಕ್ಕೆ ಬರುತ್ತದೆ. ಇದನ್ನು ಹಾಗೆ ಇಟ್ಟುಕೊಂಡು ನಂತರ ಎಂಟು ಲೀಟರ್ ನೀರನ್ನು ತೆಗೆದುಕೊಂಡು ಈ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ ಕುಟ್ಟಿ ದಂತಹ ಎಲ್ಲಾ ಮಿಶ್ರಣದ ಪೇಸ್ಟನ್ನು ನೀರಿನಲ್ಲಿ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಬೇಕು. ಎಂಟು ಲೀಟರ್ ನೀರು ಒಂದು ಲೀಟರ್ ಆಗುವ ತನಕ ಇದನ್ನು ಕುದಿಸಬೇಕು ನಂತರ ಇದಕ್ಕೆ ಒಂದು ಲೀಟರ್ ಎಳ್ಳೆಣ್ಣೆಯನ್ನು ಹಾಕಿ ಮಿಶ್ರಣ ಮಾಡಬೇಕು. ಇದನ್ನು ಬೆಳಗ್ಗೆ ಒಂದು ಚಮಚ ಸಾಯಂಕಾಲ ಒಂದು ಚಮಚ ಸೇವನೆ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.