ತಮಿಳುನಾಡಿನ ಥೇಣಿ ಜಿಲ್ಲೆಯ ವೀರಪಾಡಿ ಸಮೀಪದ ಕೊಟ್ಟೂರಿನಲ್ಲಿ ಈ ಘಟನೆ ನಡೆದಿದೆ. ರಾಜೇಶ್ ಕಣ್ಣನ್ ಎನ್ನುವ 45 ವರ್ಷದ ವ್ಯಕ್ತಿ ಮಣಿಮಂಗಳ ಎಂಬ 35 ವರ್ಷದ ಮಹಿಳೆಯನ್ನು ವಿವಾಹವಾಗಿದ್ದ. ರಾಜೇಶ್ ಕಣ್ಣನ್ ಸರ್ಕಾರಿ ಬಸ್ ಚಾಲಕನಾಗಿದ್ದ ಜೊತೆಗೆ ಆತನಿಗೆ ಉತ್ತಮ ಆದಾಯ ನೀಡುವ ತೆಂಗಿನ ತೋಟ ಕೂಡ ಇತ್ತು. ಒಟ್ಟಾರೆಯಾಗಿ ಆರ್ಥಿಕವಾಗಿ ರಾಜೇಶ್ ಸ್ಥಿತಿವಂತನಾಗಿದ್ದ. ರಾಜೇಶ್ ಕಣ್ಣನ್ ಹಾಗೂ ಮಣಿ ಮಂಗಳ ಇಬ್ಬರು ಮದುವೆಯಾಗಿ ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ.
ರಾಜೇಶ್ ಕಣ್ಣನ್ ಬಹಳ ಶ್ರಮಜೀವಿ. ಹಗಲಲ್ಲಿ ಬಸ್ ಓಡಿಸಿ ಸಂಜೆ ಮನೆಗೆ ಬಂದು ಮತ್ತೆ ತೆಂಗಿನ ತೋಟಕ್ಕೆ ಹೋಗುತ್ತಿದ್ದ ಸದಾ ಕೆಲಸದಲ್ಲಿಯೇ ನಿರತನಾಗಿರುತ್ತಿದ್ದ ರಾಜೇಶ್ ಹೆಂಡತಿಯ ಬಗ್ಗೆ ಅಷ್ಟಾಗಿ ಗಮನ ವಹಿಸಲಿಲ್ಲ. ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ ಮಣಿ ಮಂಗಳ ರಾಜೇಶ್ ನ ಸ್ನೇಹಿತ ಮಲೈ ಸ್ವಾಮಿ ಎಂಬ ವ್ಯಕ್ತಿಯ ಜೊತೆಗೆ ಸಂಬಂಧ ಬೆಳೆಸಿಕೊಂಡಳು. ಗಂಡ ಇಲ್ಲದ ಸಮಯದಲ್ಲಿ ಸದಾ ಸ್ವಾಮಿ ಜೊತೆ ಮಣಿ ಮಂಗಳ ತನ್ನು ಮಂಚದ ಆಟ ಶುರು ಮಾಡಿಕೊಳ್ಳುತ್ತಿದ್ದಳು.
ರಾಜೇಶ್ ಗೆ ಹೆಂಡತಿಯ ಬಗ್ಗೆ ಅನುಮಾನ ಇರಲಿಲ್ಲ ಅದೇ ರೀತಿಯಾಗಿ ತನ್ನ ಸ್ನೇಹಿತ ಮಲೈ ಸ್ವಾಮಿ ಬಗ್ಗೆಯೂ ಆತನಿಗೆ ನಂಬಿಕೆ ಇತ್ತು. ಹಾಗಾಗಿ ಇವರಿಬ್ಬರ ತಂಟೆಗೆ ರಾಜೇಶ್ ಹೋಗಿರಲಿಲ್ಲ. ಹೀಗೆ ಮಣಿ ಮಂಗಳ ಹಾಗೂ ಮಲೈ ಸ್ವಾಮಿ ಇಬ್ಬರ ಕಳ್ಳಾಟ ನಾಲ್ಕು ವರ್ಷಗಳ ಕಾಲ ಮುಂದುವರೆಯುತ್ತದೆ. ಆದರೆ ತಪ್ಪನ್ನ ಎಷ್ಟು ದಿನ ಮುಚ್ಚಿಡಲು ಸಾಧ್ಯ? ಕೊನೆಗೂ ರಾಜೇಶ್ ಕಣ್ಣನ್ ಇವರಿಬ್ಬರು ಒಟ್ಟಿಗೆ ಇರುವುದನ್ನು ನೋಡುತ್ತಾನೆ.
ರಾಜೇಶ್ ಕಣ್ಣನ್ ಒಂದು ದಿನ ಕೆಲಸಕ್ಕೆ ರಜೆ ಹಾಕಿ ರಾತ್ರಿ ಮನೆಗೆ ಬರುತ್ತಾನೆ. ಆ ಸಮಯದಲ್ಲಿ ಹೆಂಡತಿ ತನ್ನ ಸ್ನೇಹಿತ ಮಲೈ ಸ್ವಾಮಿ ಜೊತೆಗೆ ಮಲಗಿದ್ದಳು. ಕೂಡಲೇ ರಾಜೇಶ್ ಇವರಿಬ್ಬರನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ ಆದರೆ ಮಣಿಮಂಗಳ ತನ್ನದೇನು ತಪ್ಪಿಲ್ಲ ಎನ್ನುವಂತೆ ನಾಟಕ ಮಾಡುತ್ತಾಳೆ. ರಾಜೇಶ್ ಆಕೆಯನ್ನು ಕ್ಷಮಿಸುತ್ತಾನೆ ಇಬ್ಬರೂ ಸ್ವಲ್ಪ ದಿನ ಚೆನ್ನಾಗಿಯೇ ಇರುತ್ತಾರೆ ಆದರೆ ಮಣಿ ಮಂಗಳ ಮತ್ತೆ ತನ್ನ ಪ್ರಿಯಕರ ನನ್ನ ಸೇರುತ್ತಾಳೆ.
ಈ ವಿಷಯ ರಾಜೇಶ್ ಗೆ ಗೊತ್ತಾಗುತ್ತದೆ. ಮತ್ತೊಮ್ಮೆ ಅವರಿಬ್ಬರಿಗೂ ವಾರ್ನಿಂಗ್ ನೀಡುತ್ತಾನೆ. ತಾವಿಬ್ಬರು ಸೇರುವುದಕ್ಕೆ ರಾಜೇಶ್ ತೊಂದರೆ ಮಾಡುತ್ತಾನೆ ಎನ್ನುವ ಕಾರಣಕ್ಕೆ ಅವನನ್ನೇ ಮುಗಿಸಿ ಬಿಡಲು ಮಣಿಮಂಗಳ ಹಾಗೂ ಅವನ ಸ್ನೇಹಿತ ಸ್ಕೆಚ್ ಹಾಕುತ್ತಾರೆ. ರಾಜೇಶ್ ಒಮ್ಮೆ ಕೆಲಸಕ್ಕೆ ಹೋದವನು ಸಂಜೆ ವಾಪಸ್ ಬರುತ್ತಾನೆ.
ನಂತರ ತನ್ನ ತೋಟಕ್ಕೆ ಹೋಗುತ್ತಾನೆ. ಅಲ್ಲಿಯ ಕೆಲಸ ಮಾಡಿಕೊಂಡಿದ್ದ ರಾಜೇಶ್ ರಾತ್ರಿ ಮನೆಗೆ ಬರುವುದಿಲ್ಲ ಇಲ್ಲಿಯೇ ಕೆಲಸ ಇದೆ ಎಂದು ಹೇಳಿ ಮಣಿ ಮಂಗಳಾಳಿಗೆ ಕರೆ ಮಾಡಿ ಹೇಳುತ್ತಾನೆ. ಇದೇ ಸಮಯಕ್ಕಾಗಿ ಕಾದಿದ್ದ ಮಣಿಮಂಗಳ ತನ್ನ ಪ್ರಿಯಕರ ಮಳೆ ಸ್ವಾಮಿಗೆ ಕರೆ ಮಾಡಿ ಆತನನ್ನು ಅಲ್ಲಿಯೇ ಮುಗಿಸಲು ಹೇಳುತ್ತಾಳೆ.
ಆಕೆಯ ಮಾತಿನಂತೆ ಮಲೈ ಸ್ವಾಮಿ ರಾತ್ರಿ ಸಮಯದಲ್ಲಿ ರಾಜೇಶ್ ತೋಟದಲ್ಲಿ ಮಲಗಿದ್ದಾಗ ಅವನ ತಲೆಯ ಮೇಲೆ ಕ-ಲ್ಲು ಎ-ತ್ತಿಹಾಕಿ ಕೊ-ಲೆ ಮಾಡುತ್ತಾನೆ ನಂತರ ತನಗೆ ಏನು ಗೊತ್ತೇ ಇಲ್ಲ ಎನ್ನುವಂತೆ ಮನೆಗೆ ಹೋಗಿ ಮಲಗುತ್ತಾನೆ. ಮರುದಿನ ಈ ಘಟನೆ ವಿವರ ಪೊಲೀಸ್ ಠಾಣೆಗೆ ತಲುಪುತ್ತದೆ. ಕೂಲಂಕುಷವಾಗಿ ವಿಚಾರಣೆ ನಡೆಸಿದ ಪೊಲೀಸರು ಈ ಕೊ-ಲೆ ನಡೆಸಿದ್ದು ಮಣಿ ಮಂಗಳ ಹಾಗೂ ಮಲೈ ಸ್ವಾಮಿ ಎಂಬುದನ್ನ ತಿಳಿದುಕೊಳ್ಳುತ್ತಾರೆ. ತಮ್ಮ ಅ-ಕ್ರ-ಮ ಸಂಬಂಧಕ್ಕಾಗಿ ಅಮಾಯಕ ರಾಜೇಶ್ ನನ್ನು ಬಲಿ ಕೊಟ್ಟಿದ್ದಕ್ಕಾಗಿ ಇದೀಗ ಮಣಿ ಮಂಗಳ ಹಾಗೂ ಮಲೈ ಸ್ವಾಮಿ ಇಬ್ಬರು ಕಂಬಿ ಹಿಂದೆ ಇದ್ದಾರೆ.