ದಿನನಿತ್ಯ ನಾವು ಅನೇಕ ರೀತಿಯಾದಂತಹ ಸೊಪ್ಪು ತರಕಾರಿಗಳನ್ನು ನಮ್ಮ ದೇಹಕ್ಕೆ ಸೇವಿಸುತ್ತೇವೆ ಆದರೆ ಯಾವ ತರಕಾರಿಯಲ್ಲಿ ಯಾವ ಅಂಶಗಳಿವೆ ಅದರಿಂದ ಏನು ಉಪಯೋಗ ಎಂಬುದು ಮಾತ್ರ ನಮಗೆ ತಿಳಿದಿರುವುದಿಲ್ಲ .
ಅಂಥದ್ದೇ ಒಂದು ಪ್ರಮುಖವಾದ ತರಕಾರಿ ಎಂದರೆ ತೊಂಡೆಕಾಯಿ ಈ ತೊಂಡೆಕಾಯಿಯ ಬಗ್ಗೆ ಹಲವಾರು ಮಾಹಿತಿಗಳು ಸಾಮಾನ್ಯವಾಗಿ ತಿಳಿದಿರುವುದಿಲ್ಲ .
ಅದು ಯಾವ ರೋಗಗಳಿಗೆ ರಾಮಬಾಣ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾನು ಈ ದಿನ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ .
ತೊಂಡೆ ಕಾಯಿಯಲ್ಲಿ ಫೈಬರ್ ವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಸಿ ಅಂಶಗಳು ಹೇರಳವಾಗಿದೆ ಮತ್ತು ಕ್ಯಾಲರಿಗಳು ಕಡಿಮೆ ಇರುವುದರಿಂದ ಬೊಜ್ಜು ಕೂಡ ಈ ತರಕಾರಿಯಿಂದ ಕಡಿಮೆಯಾಗುತ್ತದೆ .
ಈ ಎಲ್ಲ ಅಂಶಗಳನ್ನು ಹೊಂದಿರುವ ತೊಂಡೆಕಾಯಿಯನ್ನು ಯಾವ ರೀತಿಯಲ್ಲಿ ಯಾವ ಕಾಯಿಲೆಗೆ ಉಪಯೋಗಿಸಬೇಕು ಎಂದು ಯೋಚಿಸುತ್ತಿದ್ದೀರಾ ಅಲ್ಲವೇ ಇಲ್ಲಿದೆ ನೋಡಿ ಮಾಹಿತಿ ಈ ತೊಂಡೆಕಾಯಿಯ ಬೀಜಗಳನ್ನು ತಿನ್ನುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ ಮತ್ತು ಮಲ ವಿಸರ್ಜನೆಯ ಸಮಸ್ಯೆ ಇದ್ದರೆ ಅದು ಕೂಡ ಕಡಿಮೆಯಾಗುತ್ತದೆ .
ಹುಳು ಏನಾದರೂ ನಮಗೆ ಕಚ್ಚಿದ್ದರೆ ತೊಂಡೆಕಾಯಿಯ ಎಲೆಗಳನ್ನು ಚೆನ್ನಾಗಿಕ ಅರೆದು ಅದರ ರಸದ ಜೊತೆಗೆ ಎಲೆಯನ್ನು ಹುಳು ಕಚ್ಚಿದ ಜಾಗಕ್ಕೆ ಇಟ್ಟರೆ ಹುಳ ಕಡಿತದಿಂದ ಮುಕ್ತಿಯನ್ನು ಪಡೆಯಬಹುದು ಮತ್ತು ಈ ತೊಂಡೆ ಕಾಯಿಯಲ್ಲಿ ವಿಟಮಿನ್ ಸಿ ವಿಟಮಿನ್ ಬಿ ಟು ವಿಟಮಿನ್ ಬಿ ತ್ರಿ ಇರುವುದರಿಂದ ರಕ್ತ ನಿರೋಧಕ ಶಕ್ತಿಯನ್ನು ತೊಂಡೆಕಾಯಿ ಹೆಚ್ಚಾಗಿ ಬಂದಿರುತ್ತದೆ.
ಮತ್ತು ತೊಂಡೆಕಾಯಿ ಎಲೆಯ ರಸವನ್ನು ದಿನಕ್ಕೆ ಮೂರು ಬಾರಿ ಸೇವಿಸುವುದರಿಂದ ನಮ್ಮ ದೇಹದ ಉಷ್ಣತೆ ಕೂಡ ಕಡಿಮೆಯಾಗುತ್ತದೆ ಎಂಬುದು ಪ್ರಮುಖವಾದಂತಹ ಅಂಶ ತೊಂಡೆಕಾಯಿ ಎಲೆಯ ರಸವನ್ನು ಮೊಸರು ಜೊತೆಗೆ ಮಿಕ್ಸ್ ಮಾಡಿ ಅಂದ್ರೆ ಒಂದು ಲೋಟ ತೊಂಡೆಕಾಯಿ ಎಲೆ ರಸಕ್ಕೆ ಒಂದು ಲೋಟ ಮೊಸರನ್ನು ಸೇರಿಸಿ ಕುಡಿಯುವುದರಿಂದ ಭೇದಿಯ ಸಮಸ್ಯೆ ಏನಾದರೂ ಇದ್ದರೆ ಅದು ಕಡಿಮೆಯಾಗುತ್ತದೆ.
ತೊಂಡೆಕಾಯಿ ರಸವನ್ನು ಚರ್ಮದ ಮೇಲೆ ಹಚ್ಚುವುದರಿಂದ ಚರ್ಮ ರೋಗದಿಂದ ನಿವಾರಣೆಯನ್ನು ಪಡೆಯಬಹುದು ಮತ್ತು ನಮ್ಮ ದೇಹದ ಮೇಲೆ ಯಾವುದಾದರೂ ಗುಳ್ಳೆಗಳು ಮತ್ತು ಕಜ್ಜಿಯ ಸಮಸ್ಯೆ ಏನಾದರೂ ಇದ್ದರೆ ಈ ಎಲೆಯನ್ನು ಪೇಸ್ಟ್ ಮಾಡಿ ಹಚ್ಚಿದರೆ ಅದು ಕಡಿಮೆಯಾಗುವ ಸಾಧ್ಯತೆಯಿದೆ ಮತ್ತು ಋತುಸ್ರಾವದಲ್ಲಿ ಮುಟ್ಟಿನ ಸಮಸ್ಯೆ ಏನಾದರೂ ಇದ್ದರೆ ಅಂದರೆ ಮುಟ್ಟಿನ ನೋವು ಏನಾದರೂ ಬರುತ್ತಿದ್ದರೆ ತೊಂಡೆಕಾಯಿ ತಿನ್ನುವುದರಿಂದ ನೋವು ಕಡಿಮೆಯಾಗುತ್ತದೆ.
ಎಳ್ಳೆಣ್ಣೆ ಜೊತೆಗೆ ತೊಂಡೆಕಾಯಿ ರಸವನ್ನು ಸೇರಿಸಿ ಕುಡಿಯುವುದರಿಂದ ಸೋರಿಯಾಸಿಸ್ ಎಂಬ ಸಮಸ್ಯೆ ಕೂಡ ಕಡಿಮೆಯಾಗುತ್ತದೆ ಪೊಟಾಶಿಯಂ ಅಂಶ ತೊಂಡೆ ಕಾಯಿಯಲ್ಲಿ ಹೆಚ್ಚಾಗಿರುವುದರಿಂದ ಹೃದಯ ರೋಗದ ಸಮಸ್ಯೆಗಳಿದ್ದರೆ ಅದು ಕೂಡ ನಮ್ಮ ದೇಹದಿಂದ ದೂರವಾಗುತ್ತದೆ ಕಣ್ಣೂರಿ ಸಮಸ್ಯೆ ಏನಾದರೂ ಇದ್ದರೆ ಎಲೆಯ ರಸಕ್ಕೆ ನೀರು ಸೇರಿಸಿ ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ಕಣ್ಣಿನ ಸಮಸ್ಯೆ ಕಡಿಮೆಯಾಗುತ್ತದೆ .
ಜೊತೆಗೆ ಎಲೆಯ ರಸಕ್ಕೆ ಕೊಬ್ಬರಿ ಎಣ್ಣೆ ಹಾಕಿ ತಲೆಗೆ ಹಚ್ಚುವುದರಿಂದ ಕೂಡ ಕಡಿಮೆಯಾಗುತ್ತದೆ .ಜೊತೆಗೆ ರಕ್ತವನ್ನು ಶುದ್ಧೀಕರಣ ಮಾಡುವಲ್ಲಿ ತೊಂಡೆಕಾಯಿ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ ಕ್ಯಾನ್ಸರ್ ರೋಗದಿಂದ ಮುಕ್ತಿಯನ್ನು ಪಡೆಯಲು ಕೂಡ ತೊಂಡೆಕಾಯಿ ಸಹಕಾರವಾಗಿದೆ ತೊಂಡೆಕಾಯಿಯನ್ನು ಹೆಚ್ಚಾಗಿ ಸೇದುವುದರಿಂದ ಕ್ಯಾನ್ಸರ್ ಕಾಯಿಲೆ ಬರದ ರೀತಿಯಲ್ಲಿ ಕೂಡ ತಡೆಗಟ್ಟಬಹುದು.
ಸಾಮಾನ್ಯವಾಗಿ ಈ ತೊಂಡೆಕಾಯಿಯನ್ನು ದಿನನಿತ್ಯದ ಊಟದಲ್ಲಿ ಅಥವಾ ಎಲೆಯ ರಸವನ್ನು ದಿನನಿತ್ಯ ಸೇವಿಸುವುದರಿಂದ ನಮ್ಮ ಆರೋಗ್ಯದಲ್ಲಿ ಅನೇಕ ರೀತಿಯ ದಂತಹ ಬದಲಾವಣೆಗಳಾಗುತ್ತದೆ ಮತ್ತು ಸಮಸ್ಯೆಗಳಿಂದ ಕೂಡ ನಾವು ಮುಕ್ತಿಯನ್ನು ಪಡೆಯಬಹುದು ಸಾಧ್ಯವಾದಷ್ಟು ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು .