ಮೌಲ್ವಿಯ ವೇಷ ಧರಿಸಿ ಭಾರತದಲ್ಲಿ ಅಡಗಿ ಕುಳಿತಿದ್ದಾರೆ ಭಯೋತ್ಪಾದಕರು: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪೋಲಿಸ್ ಅಧಿಕಾರಿ.!

ರಾಜ್ಯದಲ್ಲಿ ಮೌಲ್ವಿಗಳ ವೇಶದಲ್ಲಿ ಭಯೋತ್ಪಾದಕರು ಅಡಗಿದ್ದಾರೆ ಹಾಗೂ ಅವರು ದೇಶವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ, ಎಂದು ಆಸ್ಸಾಂನ ಪೊಲೀಸ್ ಮಹಾಸಂಚಾಲಕ ಭಾಸ್ಕರ ಜ್ಯೋತಿ ಇವರು ಹೇಳಿದ್ದಾರೆ. ಅವರು ರಾಜ್ಯದ ವಿವಿಧ ಇಸ್ಲಾಮೀ ಸಂಸ್ಥೆಗಳ ಪ್ರಮುಖರನ್ನು ಭೇಟಿಯಾಗಿ ಅವರಿಗೆ ಭಯೋತ್ಪಾದಕರನ್ನು ಮಟ್ಟಹಾಕಲು ಸಹಾಯ ಮಾಡುವಂತೆ ಕರೆ ನೀಡಿದರು. ಜಿಹಾದಿ ಭಯೋತ್ಪಾದಕರಿಗೆ ಸಹಾಯ ಮಾಡುವ ಇಸ್ಲಾಮೀ ಸಂಸ್ಥೆಗಳ ಮೇಲೆಯೂ ಕೂಡ ಕ್ರಮ ಕೈಗೊಂಡರೆ, ಇತರ ಸಂಸ್ಥೆಗಳು ತಾವಾಗಿಯೆ ಪೊಲೀಸರಿಗೆ ಸಹಾಯ ಮಾಡಲಿವೆ.

ಕಳೆದ ಕೆಲವು ವಾರಗಳಲ್ಲಿ ರಾಜ್ಯದಲ್ಲಿ ಅಲ್ ಕಾಯ್ದಾ ಮತ್ತು ‘ಅಂಸಾರುಲ್ಲಾಹ ಬಾಂಗ್ಲಾ ಟೀಮ್’ ಈ ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ ಕೆಲವು ಭಯೋತ್ಪಾದಕರನ್ನು ಬಂದಿಸಲಾಗಿದೆ. ಒಟ್ಟು ೩೮ ಜನರನ್ನು ಬಂದಿಸಲಾಗಿದೆ. ಈ ಭಯೋತ್ಪಾದಕರು ಆಸ್ಸಾಂನಲ್ಲಿನ ಮಸೀದಿಗಳಲ್ಲಿ ಇಮಾಮ್ ಅಥವಾ ಮೌಲ್ವೀಯಾಗಿ ಕೆಲಸ ಮಾಡುತ್ತಿದ್ದರು. ಆ ಹಿನ್ನೆಲೆಯಲ್ಲಿ ಭಾಸ್ಕರ ಇವರು ಕರೆ ನೀಡಿದ್ದಾರೆ.

ತಪ್ಪಿದ ಮಹಾ ದುರಂತ: ಪಾಕ್‌ನಲ್ಲಿ ತರಬೇತಿ ಪಡೆದಿದ್ದ ಇಬ್ಬರು ಸೇರಿ 6 ಭಯೋತ್ಪಾದಕರ  ಬಂಧನ!- Kannada Prabha

ಜಿಹಾದಿ ಭಯೋತ್ಪಾದಕರಿಗೆ ಧರ್ಮ ಇರುವುದಿಲ್ಲ, ಎಂದು ಹೇಳುವವರು ಈಗ ಏನೂ ಮತನಾಡುವುದಿಲ್ಲ; ಏಕೆಂದರೆ ಅವರ ಢೋಂಗಿತನ ಯಾವತ್ತೋ ಬಹಿರಂಗವಾಗಿದೆ. ಹಿಂದೂಗಳಿಗೆ ಮತ್ತು ಅವರ ಸಂತರಿಗೆ ‘ಭಯೋತ್ಪಾದಕ’ರೆಂದು ನಿರ್ಧರಿಸುವ ರಾಜಕೀಯ ಪಕ್ಷಗಳು ಅಸ್ತವಾಗುವ ಮಾರ್ಗದಲ್ಲಿವೆ, ಎಂಬುದನ್ನು ಗಮನದಲ್ಲಿಡಿ.

You might also like

Comments are closed.