ತೆಲುಗು ನಟಿ ತೇಜಸ್ವಿನಿ ಮಡಿವಾಡ, ಇದೀಗ ಸಿನಿಮಾದಲ್ಲಿ ಮಾತ್ರವಲ್ಲದೆ ಅವರು ಹಂಚಿಕೊಂಡಿರುವ ಕೆಲವು ಸೆನ್ಸೇಶನ್ ವಿಷಯಗಳ ಮೂಲಕವೂ ಹೆಚ್ಚು ಸುದ್ದಿಯಲ್ಲಿದ್ದಾರೆ. ತೆಲುಗು ಹಾಗೂ ತಮಿಳು ಸಿನಿಮಾ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ಉದಯೋನ್ಮುಖ ನಟಿ ತೇಜಸ್ವಿ. ತೇಜಸ್ವಿ ಮಡಿವಾಡ ಗುರುತಿಸಿಕೊಂಡಿದ್ದು ಬಿಗ್ ಬಾಸ್ ನಲ್ಲಿ ಭಾಗವಹಿಸಿದ ನಂತರ. ಅದಾದ ಬಳಿಕ ತೇಜಸ್ವಿ ಅವರನ್ನ ಸಾಕಷ್ಟು ಅವಕಾಶಗಳು ಅರಸಿ ಬಂದವು. ಅದರಲ್ಲೂ ಗ್ಲಾಮರ್ ಪಾತ್ರಗಳನ್ನು ಮಾಡಲು ಒಪ್ಪಿಕೊಂಡಿರುವ ತೇಜಸ್ವಿ ಅವರಿಗೆ ತುಸು ಹೆಚ್ಚಾಗಿ ಸಿನಿಮಾಗಳಲ್ಲಿ ನಟಿಸಲು ಆಫರ್ ಗಳು ಬರುತ್ತವೆ.
ತೇಜಸ್ವಿ ಮಡಿವಾಡ, 1991 ಜುಲೈ 3ರಂದು ಹೈದರಾಬಾದಿನಲ್ಲಿ ಜನಿಸಿದವರು. ಇವರ ತಂದೆ ಸರ್ಕಾರಿ ಉದ್ಯೋಗಿ. ಮಾಸ್ ಕಮ್ಯುನಿಕೇಶನ್ ವಿಷಯದಲ್ಲಿ ಪದವಿ ಪಡೆದಿದ್ದಾರೆ ತೇಜಸ್ವಿ. ಇನ್ನು ತೇಜಸ್ವಿ ಅವರು ಬಾಲ್ಯದಿಂದಲೂ ನೃತ್ಯದ ಬಗ್ಗೆ ಹೆಚ್ಚು ಪ್ರೀತಿಯನ್ನು ಬೆಳೆಸಿಕೊಂಡಿದ್ದು ಕೂಚಿಪುಡಿ ಹಾಗೂ ಪಾಶ್ಚತ್ಯ ನೃತ್ಯ ಗಳನ್ನ ಕಲಿತಿದ್ದಾರೆ. ತೇಜಸ್ವಿ ಸಿನಿಮಾದಲ್ಲಿ ಅಭಿನಯಿಸುವುದಕ್ಕೂ ಮೊದಲು ಸೆವೆನ್ ಅಪ್ ಜಾಹೀರಾತಿನಲ್ಲಿ ತೆಲುಗು ಸ್ಟಾರ್ ನಟ ಅಲ್ಲೂ ಅರ್ಜುನ್ ಜೊತೆ ಕಾಣಿಸಿಕೊಂಡಿದ್ದರು.
ಇನ್ನು ಮಹೇಶ ಬಾಬು ಅವರ ಸೀತಮ್ಮ ವಾಕಿತ್ಲೋ ಸಿರಿಮಲ್ಲೆ ಚೆಟ್ಟು ಚಿತ್ರದಲ್ಲಿಯೂ ಕೂಡ ಇವರಿಗೆ ಅವಕಾಶ ಸಿಗುತ್ತೆ. ಅದಾದ ಬಳಿಕ ಹಲವು ಚಿತ್ರಗಳಲ್ಲಿ ಅಭಿನಯಿಸುವ ಸುಯೋಗ ತೇಜಸ್ವಿ ಅವರಿಗೆ ಒಲಿದು ಬರುತ್ತವೆ. ರಾಮ್ ಗೋಪಾಲ್ ವರ್ಮಾ ಅವರ ಐಸ್ ಕ್ರೀಮ್ ಚಿತ್ರದಲ್ಲಿ ನಟಿಸಿದ ಬಳಿಕ ತೇಜಸ್ವಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಅದಾದ ಮೇಲೆ ಅವರಿಗೆ ಗ್ಲಾಮರ್ ಪಾತ್ರಗಳು ಕೂಡ ಹೆಚ್ಚಾಗಿ ಸಿಗುತ್ತಿವೆ ಸಿನಿಮಾ ಹಾಗೂ ವೆಬ್ ಸೀರೀಸ್ ಎರಡರಲ್ಲಿಯೂ ಅಭಿನಯಿಸುತ್ತ ತಮ್ಮನ್ನು ತಾವು ಸಿನಿಮಾ ರಂಗದಲ್ಲಿ ಎಷ್ಟಾಬ್ಲಿಷ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಬು ಭಾಗ ಬ್ಯುಸಿ, ಕೇರಿಂಥ, ಐಸ್ ಕ್ರೀಮ್ ರೋಜಲು ಮರಾಯಿ ಈ ಮೊದಲಾದ ಚಿತ್ರಗಳಲ್ಲಿ ನಟಿಸಿ ಉತ್ತಮ ಹೆಸರನ್ನ ಗಳಿಸಿಕೊಂಡಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವ ತೇಜಸ್ವಿ ಇತ್ತೀಚೆಗೆ ಬಿಡುಗಡೆಯಾಗಿರುವ ಅವರ ಕಮಿಟ್ಮೆಂಟ್ ಚಿತ್ರದ ಪ್ರಚಾರ ಕೆಲಸವನ್ನು ಭರದಿಂದ ನಡೆಸಿದ್ರು. ಈ ಸಿನಿಮಾ ಪ್ರಚಾರದ ಸಮಯದಲ್ಲಿ ಹಲವಾರು ಸೆನ್ಸೇಷನ್ ಪೋಸ್ಟ್ಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು.
ಅದರ ಜೊತೆಗೆ ತಮ್ಮ ಜೀವನದಲ್ಲಿ ನಡೆದ ಒಂದು ಕಹಿ ಘಟನೆಯನ್ನು ಹೇಳಿಕೊಂಡಿದ್ದು ನನ್ನ ಜೀವನದುದ್ದಕ್ಕೂ ಇದನ್ನು ಮಾತ್ರ ಮರೆಯಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಹೌದು, 31 ವರ್ಷದ ವಯಸ್ಸಿನ ತೇಜಸ್ವಿ ಮಡುವಾಡ, ತಮ್ಮ ಮೇಲೆ ಆದ ಹಲ್ಲೆಯೊಂದರ ಬಗ್ಗೆ ಹೇಳಿಕೊಂಡಿದ್ದಾರೆ. ಅತ್ಯುತ್ತಮ ಡ್ಯಾನ್ಸ್ ಆರ್ ಕೂಡ ಆಗಿರುವ ತೇಜಸ್ವಿ ಹಲವಾರು ಡ್ಯಾನ್ಸ್ ಶೋಗಳನ್ನ ನೀಡಿದ್ದಾರೆ ಹೀಗೆ ಒಂದು ಇವೆಂಟ್ ಮುಗಿದ ನಂತರ ತೇಜಸ್ವಿ ರೂಮಿಗೆ ತೆರಳುತ್ತಾರೆ.
ಈ ಸಮಯದಲ್ಲಿ ಸುಮಾರು 30 ಜನ ಕು’ಡಿದು ಬಂದು ತೇಜಸ್ವಿ ರೂ’ಮಿಗೆ ಒಂದು ಅವರ ಜೊತೆ ಕೆ’ಟ್ಟದಾಗಿ ನಡೆದುಕೊಳ್ಳುತ್ತಾರೆ. ನಂತರ ಹೇಗೋ ತ’ಪ್ಪಿಸಿಕೊಂಡು ಅಲ್ಲಿಂದ ಅಳುತ್ತಲೇ ಹಿಂತಿರುಗುತ್ತಾರೆ ತೇಜಸ್ವಿ. ಇನ್ನು ಈ ಘಟನೆಯ ನಂತರ ಸಾಕಷ್ಟು ಭಯಗೊಂಡಿದ್ದ ತೇಜಸ್ವಿ ದಿನವಿಡೀ ಅಳುತ್ತಲೇ ಇದ್ದರಂತೆ. ಈ ಘಟನೆಯನ್ನು ನಾನು ನನ್ನ ಜೀವನದುದ್ದಕ್ಕೂ ಮರೆಯಲು ಸಾಧ್ಯವೇ ಇಲ್ಲ ಅಂತ ತೇಜಸ್ವಿ ಹೇಳಿಕೊಂಡಿದ್ದಾರೆ.