ಬಾಲಿವುಡ್ ನಲ್ಲಿ ನತಿ ಸ್ವರಾ ಭಾಸ್ಕರ್ ಮುಕ್ತವಾಗಿ ಮಾತಾಡುವುದಕ್ಕೆ ತಮ್ಮ ಅಭಿಪ್ರಾಯವನ್ನು ಹೇಳುವುದಕ್ಕೆ ಹೆಸರುವಾಸಿಯಾಗಿದ್ದಾರೆ. ನಟಿ ಸ್ವರಾ ಭಾಸ್ಕರ್ ಇದೀಗ ಲೇಟೆಸ್ಟ್ ಪೋಸ್ಟ್ (Letest Post) ಒಂದನ್ನು ಮಾಡಿದ್ದಾರೆ. ಟ್ವಿಟರ್ (Twitter) ಹಾಗೂ ಇನ್ಸ್ಟಾಗ್ರಾಮ್ (Instagram) ಮೊದಲದ ಸಾಮಾಜಿಕ ಜಾಲತಾಣಗಳಲ್ಲಿ ಸ್ವರಾ ಭಾಸ್ಕರ್ ಅವರ ಮದುವೆ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ನಟಿ ಸ್ವರ ಭಾಸ್ಕರ್ ರಾಜಕಾರಣಿ ಹಾಗೂ ಕಾರ್ಯಕರ್ತ ಫಹಾದ್ ಅಹಮದ್ (Fahad Ahmad) ಅವರನ್ನು ಮದುವೆಯಾಗಿದ್ದು, ತಮ್ಮ ಲವ್ ಸ್ಟೋರಿ ಬಗ್ಗೆ ವಿಡಿಯೋ ಒಂದನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಸ್ವರಾ ಭಾಸ್ಕರ್ ಅವರ ಮದುವೆಯ ಫೊಟೋ ಹಾಗೂ ವಿಡಿಯೋಗಳು ಸ್ಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಜನವರಿ 2023ರಲ್ಲಿ ವಿಶೇಷ ವಿವಾಹ ಕಾಯ್ದೆ (Special Marriage act) ಅಡಿಯಲ್ಲಿ ಸ್ವರಾ ಹಾಗೂ ಫಹಾದ್ ಮದುವೆ ರಿಜಿಸ್ಟ್ರೇಶನ್ ಮಾಡಿಕೊಂಡಿದ್ದಾರೆ.
ಬಾಲಿವುಡ್ ನ ವೀರೇ ದಿ ವೆಡ್ಡಿಂಗ್, ರಸ್ಬರಿ, ಜಾನ್ ಚಾರ್ ಯಾರ್ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿ ಹೆಸರು ಪಡೆದುಕೊಂಡ ಸ್ವರ, ಈಗಲು ಕ್ಲವು ಪ್ರಾಕೆಜ್ಟ್ ಮಡುತ್ತಿದ್ದಾರೆ. ಈ ನದುವೆ ವಿವಾಹದ ಖುಷಿಯನ್ನೂ ಅನುಭವಿಸುತ್ತಿದ್ದಾರೆ. ಸ್ವರ ಭಾಸ್ಕರ್ ಇದೀಗ ಫಹಾದ್ ಅಹ್ಮದ್ ಅವರನ್ನು ಮದುವೆಯಾಗಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ.
ನಟಿ ಸ್ವರಾ ಭಾಸ್ಕರ್ ಇತ್ತೀಚಿಗೆ ಇನ್ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದರು ಆಕ್ಯ ತಲೆಯ ಸುದ್ದ ತೋಳೊಂದು ಬಳಸಿದ್ದು, ಹಾಸಿಗೆಯ ಮೇಲೆ ಆಕೆಯನ್ನು ಬಳಸಿದ ಆ ತೋಳು ಯಾರದಿರಬಹುದು ಅಂತ ಅಭಿಮಾನಿಗಳು ಯೋಚಿಸುತ್ತಿದ್ದರು. ಇದಕ್ಕೀಗ ಉತ್ತರ ಸಿಕ್ಕಿದೆ. ಈ ಹಿಂದೆ ಬರಹಗಾರ ಹಿಮಾಂಶು ಶರ್ಮಾ (Himamshu Sharma) ಅವರ ಜೊತೆಗೆ ಸ್ವರ ಭಾಸ್ಕರ್ ಸಂಬಂಧ ಹೊಂದಿದ್ದರು ಎನ್ನಲಾಗಿತ್ತು. ಆದರೆ ಇದನ್ನ 2019ರಲ್ಲಿ ಸ್ವರಾ ತಳ್ಳಿ ಹಾಕಿದ್ದರು.
ಸ್ವರಾ ಭಾಸ್ಕರ್ ಮದುವೆ ಆಗಿರುವ ಹುಡುಗ ಫಹದ್ ಅಹಮದ್ ಸಮಾಜವಾದಿ ಪಕ್ಷದ ಯುವ ಘಟಕ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಎನ್ನಲಾಗಿದೆ. ಸ್ವರ ಭಾಸ್ಕರ ತಮ್ಮ ಪ್ರೇಮಕಥೆಯನ್ನು ಹೇಳುವಂತಹ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಈ ರೀತಿ ಬರೆದುಕೊಂಡಿದ್ದಾರೆ. “ಕೆಲವೊಮ್ಮೆ ನಮ್ಮ ಪಕ್ಕದಲ್ಲಿಯೇ ಯಾವುದೋ ಒಂದು ವಿಷಯ ಇದ್ದರೂ ದೂರದಲ್ಲಿ ಎಲ್ಲೋ ಅದನ್ನು ಹುಡುಕುತ್ತೇವೆ ನಾವು ಪ್ರೀತಿಯನ್ನು ಹುಡುಕುತ್ತಿದ್ದೆವು.
ಆದರೆ ಮೊದಲು ಸ್ನೇಹವನ್ನು ಕಂಡುಕೊಂಡಿದ್ದೇವೆ. ನಂತರ ನಾವು ಒಬ್ಬರನ್ನು ಒಬ್ಬರು ಕಂಡುಕೊಂಡಿದ್ದೇವೆ ನನ್ನ ಹೃದಯಕ್ಕೆ ಸ್ವಾಗತ ನನ್ನ ಮನಸ್ಸು ಅಸ್ವಸ್ತವಾಗಿತ್ತು. ಆದರೆ ಅದು ಸಂಪೂರ್ಣವಾಗಿ ನಿನ್ನದಾಗಿದೆ”. ಎಂಬುದಾಗಿ ಸ್ವರ ಭಾಸ್ಕರ್ ಪೋಸ್ಟ್ ಹಾಕಿಕೊಂಡಿದ್ದಾರೆ.
ಇನ್ನು ಈ ಹಿಂದೆ ಸ್ವಾರಾ ಭಾಸ್ಕರ್ ಫಹಾದ್ ಅವರಿಗೆ ಭಾಯಿ ಎಂದು ಸಂಭೋದಿಸಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಸದ್ಯ ಈ ಪೋಸ್ಟ್ ಜೊತೆಗೆ ಸ್ವರಾ ಅವರ ಮದುವೆ ಪೋಸ್ಟ್ ನ್ನೂ ಟ್ಯಾಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಭಾಯಿಯನ್ನೇ ಪತಿ ಮಾಡಿಕೊಳ್ಳುವ ಅನಿವಾರ್ಯತೆ ಇತ್ತಾ ಅಂತ ಪ್ರಶ್ನೆ ಮಾಡಿದ್ದಾರೆ.