Small Gas Cylinder: ಕೇಂದ್ರ ಮತ್ತು ರಾಜ್ಯ ಸರ್ಕಾರ (State And Central Govt) ಒಗ್ಗೂಡಿಕೊಂಡು ದೇಶದ ಬಡವರಿಗಾಗಿ ಈಗಾಗಲೇ ಹಲವು ಯೋಜನೆಯನ್ನ ಜಾರಿಗೆ ತಂದಿದ್ದು. ಹೌದು ಬಡವರಿಗೆ ಯಾವುದಕ್ಕೂ ಸಮಸ್ಯೆ ಆಗಬಾರದು ಅನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಈಗಾಗಲೇ ಹಲವು ಯೋಜನೆಯನ್ನ ಜಾರಿಗೆ ತಂದಿತ್ತು ಮತ್ತು ಈಗಲೂ ಕೂಡ ಕೆಲವು ಯೋಜನೆಯನ್ನ ಜಾರಿಗೆ ತರುವುದರ ಮೂಲಕ ಜನರಿಗೆ ಗುಡ್ ನ್ಯೂಸ್ ನೀಡುತ್ತಿದೆ.
ರೇಷನ್ ಕಾರ್ಡ್ (Ration Card) ಹೊಂದಿರುವ ಬಡಜನರ ಅನುಕೂಲದ ಉದ್ದೇಶದಿಂದ ಈಗಾಗಲೇ ರೇಷನ್ ಧಾನ್ಯಗಳು ಮತ್ತು ಇತರೆ ಸೇವೆಯನ್ನ ಒದಗಿಸಲಾಗಿದ್ದು ಈಗ ರೇಷನ್ ಕಾರ್ಡ್ ಹೊಂದಿರುವ ಜನರಿಗೆ ಇನ್ನೊಂದು ಬಂಪರ್ ಆಫರ್ ನೀಡಲಾಗಿದೆ.
ಕಡಿಮೆ ಬೆಲೆಯಲ್ಲಿ ಸಿಗಲಿದೆ ಗ್ಯಾಸ್ ಸಿಲಿಂಡರ್
ಹೌದು ಇನ್ನುಮುಂದೆ ರೇಷನ್ ಅಂಗಡಿಗಳಲ್ಲಿ ಕಡಿಮೆ ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್ (Gas Cylinder) ಗಳನ್ನ ವಿತರಣೆ ಮಾಡಲು ಈಗ ಸರ್ಕಾರ ತೀರ್ಮಾನ ಮಾಡಿದ್ದು ಇನ್ನುಮುಂದೆ ರೇಷನ್ ಕಾರ್ಡ್ ಹೊಂದಿರುವವರಿಗೆ ರೇಷನ್ ಅಂಗಡಿಗಳಲ್ಲಿ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ಗಳನ್ನ ಪಡೆಯಬಹುದಾಗಿದೆ.
ಪಡಿತರ ಚೀಟಿ ಹೊಂದಿರುವವರಿಗೆ ಸಿಗಲಿದೆ ಕಡಿಮೆ ತೂಕದ LPG ಗ್ಯಾಸ್
ಕೆಲವು ಬಡವರಿಗೆ ಹೆಚ್ಚು ಹಣವನ್ನ ನೀಡಿ ಹೆಚ್ಚಿನ ತೂಕದ ಗ್ಯಾಸ್ ಸಿಲಿಂಡರ್ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ ಅನ್ನುವ ಕಾರಣಕ್ಕೆ ಅವರಿಗೆ ಕಡಿಮೆ ತೂಕ ಗ್ಯಾಸ್ ಕೊಡುವ ಕೊಡುವ ಉದ್ದೇಶದಿಂದ ಈ ಹೊಸ ಯೋಜನೆಯನ್ನ ಜಾರಿಗೆ ತರುವುದರ ಮೂಲಕ ದೀಪಾವಳಿ ಉಡುಗೊರೆ ನೀಡಿದೆ ಸರ್ಕಾರ.
ಪಡಿತರ ಅಂಗಡಿಗಳಲ್ಲಿ ಸಿಗಲಿದೆ 5 ಕೆಜಿ ತೂಕದ ಗ್ಯಾಸ್ ಸಿಲಿಂಡರ್
ಸಾಮಾನ್ಯವಾಗಿ ಇಂಧನ ಕಂಪನಿಗಳು ಮನೆಗೆ ಮನೆಗೆ 14 ಕೆಜಿ ಗ್ಯಾಸ್ ಸಿಲಿಂಡರ್ ಗಳನ್ನ ಸರಬರಾಜು ಮಾಡುತ್ತದೆ ಮತ್ತು ಅದರ ಬೆಲೆ ಕೂಡ ಜಾಸ್ತಿಯಾಗಿದೆ. ಹೆಚ್ಚಿನ ಬಡವರು ಕಡಿಮೆ ತೂಕದ ಕಡಿಮೆ ಬೆಲೆಯ ಗ್ಯಾಸ್ ಇಷ್ಟಪಡುವುದರ ಮೂಲಕ ಪಡಿತರ ಅಂಗಡಿಗಳಲ್ಲಿ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಲು ತೀರ್ಮಾನವನ್ನ ಮಾಡಲಾಗಿದೆ.
ಇಂಧನ ಇಲಾಖೆಯ ಜೊತೆ ಯಶಸ್ವಿ ಸಭೆ
ಪಡಿತರ ಅಂಗಡಿಗಳಲ್ಲಿ 5 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ವಿತರಣೆ ಮಾಡುವ ಕುರಿತಂತೆ ಇಂಧನ ಇಲಾಖೆ ಮತ್ತು ಕೆಲವು ಇಂಧನ ಸರಬರಾಜು ಕಂಪನಿಗಳ ಜೊತೆ ಮಾತುಕತೆಯನ್ನ ಮಾಡಲಾಗಿದ್ದು ಅದಕ್ಕೆ ಅವರ ಒಪ್ಪಿಗೆ ಕೂಡ ಸಿಕ್ಕಿದೆ ಎಂದು ತಿಳಿದುಬಂದಿದೆ.
339 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್
ಪಡಿತರ ಚೀಟಿ ಹೊಂದಿರುವವರು ಐದು ಕೆಜಿ ಗ್ಯಾಸ್ ಸಿಲಿಂಡರ್ ಅನ್ನು ಪಡಿತರ ಅಂಗಡಿಗಳಲ್ಲಿ 339 ರೂಪಾಯಿಗೆ ಖರೀದಿ ಮಾಡಬಹುದಾಗಿದೆ. ಈ ಗ್ಯಾಸ್ ಸಿಲಿಂಡರ್ ಅನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ತಗೆದುಕೊಂಡು ಹೋಗಲು ಬಹಳ ಸುಲಭವಾದ ಕಾರಣ ಹೆಚ್ಚಿನ ಜನರು ಸರ್ಕಾರದ ಈ ಯೋಜನೆಗೆ ಮೆಚ್ಚುಗೆಯನ್ನ ಕೂಡ ವ್ಯಕ್ತಪಡಿಸಿದ್ದಾರೆ.
ಬೆಂಕಿ ತಡೆಗೆ ಅಗತ್ಯ ಕ್ರಮ
ಗ್ಯಾಸ್ ಸಿಲಿಂಡರ್ ಗಳಲ್ಲಿ ಪಡಿತರ ಅಂಗಡಿಗಳಲ್ಲಿ ಇಟ್ಟುಕೊಳ್ಳುವುದು ಅಪಾಯಕಾರಿಯಾದ ಕಾರಣ ಅಲ್ಲಿ ಕೆಲವು ಸುರಕ್ಷಿತ ವಸ್ತುಗಳನ್ನ ಇಟ್ಟುಕೊಳ್ಳುವುದು ಅತ್ಯವಶ್ಯಕವಾದ ಕಾರಣ ಕೆಲವು ಸುರಕ್ಷತಾ ಕ್ರಮಗಳ ಬಗ್ಗೆ ಕೂಡ ಚಿಂತನೆಯನ್ನ ಮಾಡಲಾಗುತ್ತಿದೆ.
ಮುಂದಿನ ತಿಂಗಳಿಂದ ಈ ಯೋಜನೆ ಜಾರಿಗೆ ಬರುವ ಸಾಧ್ಯತೆ
ಎಲ್ಲಾ ಸುಸೂತ್ರವಾಗಿ ಆದರೆ ಮುಂದಿನ ತಿಂಗಳಿಂದ ಯಶಸ್ವಿಯಾಗಿ ಈ ಯೋಜನೆ ಆರಂಭ ಆಗಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ಇದರ ಕುರಿತು ಸರ್ಕಾರ ಇನ್ನೇನು ಕೆಲವೇ ದಿನಗಳಲ್ಲಿ ಅಧಿಕೃತ ಮಾಹಿತಿ ಹೊರಹಾಕುವ ಸಾಧ್ಯತೆ ಇದೆ.