ಸ್ನೇಹಿತರೆ, ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಹಿಂದಿನ ಕಾಲದಲ್ಲೆಲ್ಲಾ ಪುರುಷ ಪ್ರಧಾನ ಸಮಾಜ ಇತ್ತು. ಹಾಗಾಗಿ ಹೆಣ್ಣುಮಕ್ಕಳು ಹೆಚ್ಚಾಗಿ ಯಾವುದೇ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿರಲಿಲ್ಲ. ಬದಲಿಗೆ ನಾಲ್ಕು ಗೋಡೆಯ ಮಧ್ಯೆ ತನ್ನ ಇಡೀ ಜೀವನವನ್ನು ಕಳೆಯಬೇಕಾದಂತಹ ಪರಿಸ್ಥಿತಿ.
ಆದರೆ ಈಗ ಜಗತ್ತು ಮುಂದುವರೆದಿದೆ, ಜನರ ಆಲೋಚನೆಯು ಬದಲಾಗಿದೆ. ಹೌದು ಗೆಳೆಯರೇ ಸ್ತ್ರೀ ಮತ್ತು ಪುರುಷರ ನಡುವೆ ಯಾವುದೇ ರೀತಿಯಾದಂತಹ ಭೇದವಿಲ್ಲ ಏಕತೆ ಎಂಬುದು ಜನರ ಮನಸ್ಸಿನಲ್ಲಿ ಸೃಷ್ಟಿಯಾಗಿದೆ.
ಆದ್ದರಿಂದಲೇ ಹೆಣ್ಣು ಗಗನ ಸಖಿಯಿಂದ ಹಿಡಿದು ಆಟೋ ಡ್ರೈವರ್ ವರೆಗೂ ಕೂಡ ತನ್ನ ವೃತ್ತಿ ಬದುಕನ್ನು ವಿಸ್ತರಿಸಿ ತನ್ನ ಗಂಡನಷ್ಟೇ ಸಂಭಾವನೆಯನ್ನು ಮನೆ ಕೆಲಸದೊಂದಿಗೆ ಮನೆಗೆ ತರುತ್ತಾಳೆ.
ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ಗಂಡನಿಗೆ ಸರಿಸಮಾನನಾಗಿ ನಿಲ್ಲುವ ಸ್ಥಾನ ಗಳಿಸಿಕೊಂಡಿರುವಂತಹ ಹೆಣ್ಣುಮಗಳು ಆ ಒಂದು ವಿಚಾರದಲ್ಲಿ ಮಾತ್ರ ಪುರುಷರಿಗಿಂತ ಮುಂದಿದ್ದಾಳೆ. ಅಷ್ಟಕ್ಕೂ ಆ ವಿಚಾರ ಯಾವುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ..
ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಚಾಣಕ್ಯನನ್ನು ತತ್ವಜ್ಞಾನಿ ಎಂದು ನಮ್ಮ ಸಮಾಜ ಒಪ್ಪಿದೆ. ಹೌದು ಗೆಳೆಯರೇ, ಚಾಣಕ್ಯ ತನ್ನ ಗ್ರಂಥದಲ್ಲಿ ನಮೂದಿಸಿರುವುದನ್ನು ಇಂದಿಗೂ ಕೂಡ ನಮ್ಮ ಜನರು ಅನುಸರಿಸುತ್ತಾ ಬಂದಿದ್ದಾರೆ.
ಅದರಂತೆ ಚಾಣಕ್ಯ ನೀತಿಯಲ್ಲಿ ಮನುಷ್ಯ ಜೀವನಕ್ಕೆ ಸಂಬಂಧಿಸಿದಂತಹ ಎಲ್ಲ ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಚಾಣಕ್ಯ ನೀತಿಯು ಕೇವಲ ಹಣ ಅಂತಸ್ತು, ಯಶಸ್ಸು ಹೀಗೆ ಇಂತಹ ವಿಷಯಗಳ ಕುರಿತು ಮಾತ್ರ ಪ್ರಾಮುಖ್ಯತೆ ನೀಡಲಿಲ್ಲ.
ಬದಲಿಗೆ ಜನರ ಜೀವನ, ಸ್ತ್ರೀ-ಪುರುಷ ನಡುವೆ ಇರುವಂತಹ ಹೊಂದಾಣಿಕೆ ಹೀಗೆ ಅತಿ ಅವಶ್ಯಕತೆ ಇರುವಂತಹ ವಿಚಾರಗಳ ಕುರಿತು ಚಾಣಕ್ಯ ಜನರಿಗೆ ತಿಳಿಸ ಹೊರಟಿದ್ದ. ಹೀಗೆ ಚಾಣಕ್ಯ ಶ್ರೀ ಪುರುಷರಿಗಿಂತ ಯಾವ ವಿಚಾರದಲ್ಲಿ ಮುಂದಿರುತ್ತಾಳೆ ಎಂಬುದನ್ನು ತಿಳಿಸಿದ್ದಾನೆ.
ಆ ಕುರಿತು ನೋಡುವುದಾದರೆ ಬುದ್ಧಿವಂತಿಕೆಯಲ್ಲಿ ಸ್ತ್ರೀ ಪುರುಷರಿಗಿಂತಲೂ ಬುದ್ಧಿವಂತೆ ಹೀಗಾಗಿ ತಾನು ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿಯೂ ಸ್ತ್ರೀ ಏಕಾಗ್ರತೆಯನ್ನು ಹೊಂದಿರುತ್ತಾಳೆ. ಇನ್ನು ಮಹಿಳೆಯರಲ್ಲಿ ಪುರುಷರಿಗಿಂತ ಆರುಪಟ್ಟು ಧೈರ್ಯ ಹೆಚ್ಚಾಗಿರುತ್ತದೆ.
ಹೀಗಾಗಿ ಹಲವಾರು ಕಡೆಗಳಲ್ಲಿ ಸ್ತ್ರೀತನ ಸಾಹಸಿ ರೂಪವನ್ನು ತೋರಿಸಿ ದುಷ್ಟಶಕ್ತಿಯನ್ನು ದೂರ ಮಾಡಿದ್ದಾಳೆ. ಇನ್ನು ಮೂರನೆಯದಾಗಿ ಹಸಿವನ್ನು ತಡೆದುಕೊಳ್ಳುವಂತಹ ಶಕ್ತಿ ಗಂಡಸರಿಗೆ ಹೋಲಿಸಿದರೆ ಹೆಂಗಸರಿಗೆ ಹೆಚ್ಚಾಗಿರುತ್ತದೆ. ಇನ್ನು ಒತ್ತಡ ಸಹಿಸುವ ಸ್ವಭಾವದಲ್ಲಿಯೂ ಸ್ತ್ರೀಯರು ಪುರುಷರನ್ನು ಎಂದಿಕ್ಕುತ್ತಾರೆ.