
ಶಾಲೆಯಲ್ಲಿ ಪಠ ಮಾಡುವ ಶಿಕ್ಷಕಿ ಅಂದರೆ ದೇವರಿಗೆ ಸಮಾನ. ಮಕ್ಕಳಿಗೆ ತಿದ್ದಿ ಬುದ್ದಿ ಹೇಳಿ ಅವರನ್ನು ಪ್ರಬುದ್ಧ ನಾಗರಿಕರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರದ್ದು. ಹಾಗಾಗಿ ಶಿಕ್ಷಕರು ಹೆಚ್ಚು ಸಕಾರಾತ್ಮಕವಾಗಿಯೇ ಇರಬೇಕು. ಮಕ್ಕಳು ತಪ್ಪು ಮಾಡಿದಾಗ ಅವರನು ತಿದ್ದಿ, ಸೋತಾಗ ಸಾಂತ್ವಾನ ಹೇಳಿ ಅವರಲ್ಲಿ ಧೈರ್ಯ ತುಂಬುವವರೇ ಶಿಕ್ಷಕರು.
ಆದರೆ ಇಲ್ಲೊಬ್ಬ ಶಿಕ್ಷಕಿ ಜೀವನದಲ್ಲಿ ನಡೆದ ಸಂಕಷ್ಟವನ್ನು ಎದುರಿಸಲಾಗದೇ ತಮ್ಮ ಜೀವವನ್ನೇ ತೆಗೆದುಕೊಂಡಿದ್ದಾರೆ. ಖಾಸಗಿ ಶಾಲಾ ಶಿಕ್ಷಕಿ ಒಬ್ಬಳು ಶಾಲೆಯಲ್ಲಿಯೇ ಆ-ತ್ಮ-ಹ-ತ್ಯೆ ಮಾಡಿಕೊಂಡಿರುವ ಘಟನೆ ಹಡಗಲಿ ನ್ಯಾಷನಲ್ ಶಾಲೆಯಲ್ಲಿ ನಡೆದಿದೆ. ಹಡಗಲಿ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕಿ ಶಾಲೆಯಲ್ಲಿಯೇ ಆ-ತ್ಮ-ಹ-ತ್ಯೆ ಮಾಡಿಕೊಂಡಿದ್ದು ವಿದ್ಯಾರ್ಥಿಗಳಿಗೂ ಸಾಕಷ್ಟು ನೋವನ್ನು ತಂದಿದೆ ಜೊತೆಗೆ ವಿದ್ಯಾರ್ಥಿಗಳಲ್ಲಿ ಕೆಲವರು ಭಯಪಟ್ಟಿದ್ದಾರೆ.
ಅಷ್ಟಕ್ಕೂ ಆ ಶಿಕ್ಷಕಿ ಶಾಲೆಯಲ್ಲಿ ಆ-ತ್ಮ-ಹ-ತ್ಯೆ ಮಾಡಿಕೊಂಡಿದ್ದಕ್ಕೆ ಕಾರಣವೇನು ಗೊತ್ತಾ? ಆ ಶಿಕ್ಷಕಿಯ ಹೆಸರು ಬಸ್ಸಮ್ಮ ಅಲಿಯಾಸ್ ರೂಪ. ಆಕೆಗೆ 34 ವರ್ಷ ವಯಸ್ಸಾಗಿತ್ತು. ಹಡಗಲಿಯ ನ್ಯಾಷನಲ್ ಶಾಲೆಯಲ್ಲಿ ಶಿಕ್ಷಕಿಯಾಗಿ ಆಕೆ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚಿಗೆ ಪತ್ರ ಒಂದನ್ನು ಬರೆದಿಟ್ಟು ಶಾಲಾ ಕೊಠಡಿಯಲ್ಲಿಯೇ ವಿಷ ಸೇವಿಸಿ ಆ-ತ್ಮ- ಹ-ತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹವೇ ಆಕೆ ಈ ನಿರ್ಧಾರ ತೆಗೆದುಕೊಳ್ಳಲು ಕಾರಣ ಎಂದು ಹೇಳಲಾಗಿದೆ.
ವರದಕ್ಷಿಣೆ ಕಿ-ರು-ಕು-ಳ ತಡೆಯಲಾಗದೆ ರೂಪ ಆ-ತ್ಮ-ಹ-ತ್ಯೆಗೆ ಶರಣಾಗಿದ್ದಾಳೆ ಎನ್ನುವ ಅನುಮಾನ ಮೂಡಿದೆ. ಈಗಾಗಲೇ ರೂಪ ಅವರ ಗಂಡ ಅರ್ಜುನ್, ಅತ್ತೆ ಅಂಬಿಕ, ನಾದಿನಿ ಸಂಗೀತ ಮೊದಲಾದವರು ಪೊಲೀಸ್ ವಿಚಾರಣೆಗೆ ಒಳಪಟ್ಟಿದ್ದಾರೆ. ಕುಟುಂಬದ ಒಟ್ಟು ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ರೂಪ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ನ್ಯಾಷನಲ್ ಶಾಲೆ ಆಕೆಯ ಪತಿ ಅರ್ಜುನ್ ಕುಟುಂಬದ ಒಡೆತನಕ್ಕೆ ಸೇರಿದ್ದು. ಭಾನುವಾರ ಪರೀಕ್ಷೆ ಕೆಲಸದ ಸಲುವಾಗಿ ಶಾಲೆಗೆ ಬಂದ ಬಸಮ್ಮ ಅಲಿಯಾಸ್ ರೂಪ ಶಾಲಾ ಕೊಠಡಿಯಲ್ಲಿ ವಿಷ ಸೇವಿಸಿ ಜೀವ ಕಳೆದುಕೊಂಡಿದ್ದಾರೆ. ಇನ್ನು ತಾವು ಸಾಯೋದಕ್ಕೂ ಮೊದಲು ಸೂ-ಸೈ-ಡ್ ಲೆಟರ್ ಕೂಡ ಬರೆದು ಇಟ್ಟಿದ್ದಾರೆ. ಡೆ-ತ್ ನೋ-ಟ್ ನಲ್ಲಿ ಏನು ಬರೆದಿದ್ದಾರೆ ಎಂಬುದು ಬಹಿರಂಗವಾಗಿಲ್ಲ.
ಅರ್ಜುನ್ ಹಾಗೂ ರೂಪ ಇಬ್ಬರು 10 ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆದವರು. ಆದರೆ ಇತ್ತೀಚಿಗೆ ಬಸಮ್ಮ ಅವರ ಕುಟುಂಬದಲ್ಲಿ ಕಲಹ ಹೆಚ್ಚಾಗಿತ್ತು ಇದೇ ಕಾರಣಕ್ಕೆ ರೂಪ ಆ-ತ್ಮ-ಹ-ತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ವಿಷಯಕ್ಕೆ ಸಂಬಂಧಪಟ್ಟಹಾಗೆ ಪೊಲೀಸರು ವಿಶೇಷ ನಿಗಾವಹಿಸಿ ತನಿಖೆ ನಡೆಸುತ್ತಿದ್ದಾರೆ.
Comments are closed.