
ಸ್ನೇಹಿತರೆ, ಕನ್ನಡ ಚಿತ್ರರಂಗದ ಮರೆಯಲಾಗದ ಯಾರೂ ಸಹ ಬೆಲೆಕಟ್ಟಲಾಗದ ಒಂದು ಮಾಣಿಕ್ಯ ಅಂದ್ರೆ ಅದು ಪುನೀತ್ ರಾಜಕುಮಾರ್ ರವರು ಮಾತ್ರ ಎಂದರೆ ತಪ್ಪಾಗಲಾರದು. ಹೌದು ಬದುಕಿದ 46 ವರ್ಷಗಳಲ್ಲಿ ಯಾರೂ ಇವರನ್ನು ಮರೆಯಲು ಸಾಧ್ಯವೇ ಇಲ್ಲ ಎನ್ನುವಂತೆ ಸಾಧನೆ ಮಾಡಿದ ಅಪ್ಪು ಕರ್ನಾಟಕದ ಆಸ್ತಿ. ಅದೆಷ್ಟೋ
ಜನರಿಗೆ ಗೊತ್ತಿಲ್ಲದಂತೆ ಬಲಗೈಯಲ್ಲಿ ನೀಡಿದ್ದು ತನ್ನ ಎಡಗೈಗು ಗೊತ್ತಾಗದಂತೆ ಸಹಾಯ ಮಾಡುತ್ತಿದ್ದ ವ್ಯಕ್ತಿ ಪುನೀತ್ ರಾಜಕುಮಾರ್. ಇವರು ಕರ್ನಾಟಕ ಜನತೆಯನ್ನು ಅಗಲಿ ಹೋಗಿದ್ದರೂ ಸಹ ಇವರನ್ನು ಪ್ರೀತಿಸುವ ಹೃದಯಗಳು ಅಗಲುವ ವರೆಗೆ ಇವರನ್ನು ಯಾರಿಂದಲೂ ಮರೆಯಲು ಸಾಧ್ಯವೇ.
ನಿಜ ಕನ್ನಡದ ಸ್ಟಾರ್ ನಟರೊಬ್ಬರು ಪುನೀತ್ ರಾಜಕುಮಾರ್ ರವರ ಫೋಟೋವನ್ನು ತಮ್ಮ ಮನೆಯ ದೇವರ ಕೋಣೆಯಲ್ಲಿ ಇಟ್ಟು ಪ್ರತಿನಿತ್ಯ ಪೂಜಿಸುತ್ತಿರುವ ವಿಷಯ ಇದೀಗ ಬೆಳಕಿಗೆ ಬಂದಿದೆ. ಹೌದು ಫ್ರೆಂಡ್ಸ್ ಕನ್ನಡದ ಖ್ಯಾತ ನಟ ಸತೀಶ್ ನೀನಾಸಂ ರವರು ಪುನೀತ್
ರಾಜಕುಮಾರ್ ರವರ ಚಿತ್ರಗಳನ್ನು ನೋಡಿ ಅವರ ಅಭಿಮಾನಿ ಆದವರು. ಪುನೀತ್ ರಾಜಕುಮಾರ್ ರವರು ಇನ್ನಿಲ್ಲ ಎನ್ನುವ ವಿಷಯ ಸತೀಶ್ ನೀನಾಸಂ ಅವರಿಂದ ಮರೆಯಲು ಸಾಧ್ಯವಾಗುತ್ತಿಲ್ಲ. ಆದ ಕಾರಣ ಅಪ್ಪು ಫೋಟೋವನ್ನು ತಮ್ಮ ಮನೆಯ ದೇವರ ಕೋಣೆಯಲ್ಲಿ ಇಟ್ಟು ಪ್ರತಿನಿತ್ಯ ತಾವೇ ಪೂಜೆ ಪುಸ್ಕಾರಗಳನ್ನು ಮಾಡುತ್ತಿದ್ದಾರೆ.
ಈ ಫೋಟೋವನ್ನು ಸತೀಶ್ ನೀನಾಸಂ ರವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು ಇದನ್ನು ನೋಡಿದ ಅಭಿಮಾನಿಗಳು ನೀವು ನಿಜವಾಗಿಯೂ ಗ್ರೇಟ್ ಸರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದರ ಬಗ್ಗೆ ನೀವು ಸಹ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಪುನೀತ್ ರಾಜಕುಮಾರ್ ರವರಿಗೆ
ಸೆಲೆಬ್ರಿಟಿಗಳಲ್ಲಿ ಕೂಡ ಆರಾಧಿಸುವ ಸಾಕಷ್ಟು ಸ್ಟಾರ್ ಅಭಿಮಾನಿಗಳು ಇದ್ದಾರೆ ಎನ್ನುವುದು ಈ ಪೋಸ್ಟ್ ನೋಡಿದ ಮೇಲೆ ಅರ್ಥವಾಗುತ್ತದೆ. ಏನೇ ಹೇಳಿ ಬದುಕಿದರೆ ಪ್ರತಿಯೊಬ್ಬರೂ ಹೀಗೆ ಬದುಕಬೇಕು ಎಂದು ಎಲ್ಲರಿಗೂ ತಿಳಿಯುವಂತೆ ಮಾಡಿ ಮಾರೆಯಾದ ಈ ಮಾಣಿಕ್ಯನಿಗೆ ಒಂದು ಸಲಾಂ ಹೇಳಲೇಬೇಕು ಕಣ್ರೀ.
Comments are closed.