ಕಳೆದ ಕೆಲವು ದಿವಸಗಳ ಹಿಂದೆ ದರ್ಶನ ಅವರ ಕ್ರಾಂತಿ ಚಿತ್ರದ ಗೊಂಬೆ ಗೊಂಬೆ ಹಾಡು ರಿಲೀಸ್ ಮಾಡುವ ಸಲುವಾಗಿ ಕ್ರಾಂತಿ ಸಿನಿಮಾ ತಂಡ ಹೊಸಪೇಟೆಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕ್ರಾಂತಿ ಚಿತ್ರದ ನಾಯಕ ದರ್ಶನ್ ಹಾಗೂ ನಾಯಕಿ ರಚಿತಾ ರಾಮ್ ಸಹ ಉಪಸ್ಥಿತರಿದ್ದರು. ಕ್ರಾಂತಿ ಚಿತ್ರದ ಟ್ರೈಲರ್ ಎಲ್ಲೆಡೆಗೂ ಚರ್ಚೆ ಯಾಗಿತ್ತು ಹೀಗಾಗಿ ಆ ಸಿನಿಮಾದಲ್ಲಿಯ ಈ ಹಾಡು ರೀಲಿಸ್ ಸಂದರ್ಭದಲ್ಲಿ ಅದೆಷ್ಟೋ ಅಭಿಮಾನಿಗಳು ಸೇರಿದ್ದರು.
ಈ ಕಾರ್ಯಕ್ರಮದ ನಡುವೆ ಒಂದು ಅನಾಹುತ ನಡೆದು ಹೋಯಿತು ಅದೆಲ್ಲ ನಿಮಗೆ ಗೊತ್ತೇ ಇದೆ. ಡಿ ಬಾಸ್ ಅವರ ಮೇಲೆ ಒಬ್ಬ ಕಿಡಿಗೇಡಿ ಚಪ್ಪಲಿ ಎಸೆದದ್ದು. ಆದರೆ ಈ ಘಟನೆಯ ಕುರಿತು ಇಡೀ ರಾಜ್ಯಾದ್ಯಂತ ತೀವ್ರವಾಗಿ ವಿರೋಧ ವ್ಯಕ್ತ ವಾಯಿತು. ಇದನ್ನು ಸರಿಪಡಿಸಲು ದರ್ಶನ್ ಅವರು ಇಂತಹ ಘಟನೆಗೆ ನಾನು ತಗ್ಗೋನಲ್ಲ ಇದೆಲ್ಲ ಸಾಮಾನ್ಯ ಎಂದು ಈ ಘಟನೆಯನ್ನು ಅಲ್ಲಿಯೇ ಮುಚ್ಚಿ ಹಾಕಿದ್ದರು. ಇದೆಂಥ ಅವರ ದೊಡ್ಡ ಗುಣ, ಈ ಘಟನೆಯ ವಿರುದ್ಧ ಒಂದು ಮಾತು ಸಹ ಅವರು ಹೇಳಿದ್ದರೆ ಇಡೀ ಕರ್ನಾಟಕದ ತುಂಬೆಲ್ಲಾ ದಂಗೆಯ ವಾತಾವರಣ ನಿರ್ಮಾಣ ವಾಗುತ್ತಿತು ಇದನ್ನು ಅರಿತ ದರ್ಶನ್ ಅವರು ಆ ರೀತಿಯಾಗಿ ಮಾತನಾಡಿ ಅಭಿಮಾನಿಗಳು ಮನಸ್ಸು ಶಾಂತಿ ಗೊಳಿಸಿದರು.
ಕ್ರಾಂತಿ ಚಿತ್ರದ ಇಂತಹ ಅವಿಸ್ಮರಣೀಯ ಘಟನೆಯ ಕುರಿತು ಇಡೀ ರಾಜ್ಯಾದ್ಯಂತ ಎಲ್ಲ ಅಭಿಮಾನಿಗಳು, ಕನ್ನಡ ಚಿತ್ರರಂಗ, ನಟರು, ನಟಿಯರು ತೀವ್ರವಾಗಿ ವಿರೋಧ ವ್ಯಕ್ತ ಮಾಡಿದರು. ಈ ಘಟನೆಯಿಂದ ಕರುನಾಡಿನ ಚಿತ್ರರಂಗ ಸಂತಸ ಪಡುವ ಸಂಗತಿಯೊಂದು ನಡೆಯಿತು ಅದೇನೆಂದರೆ, ಸುಮಾರು ವರ್ಷಗಳಿಂದ ಜೀವಕ್ಕಿಂತ ಹೆಚ್ಚಾಗಿದ್ದ ಜಿಗರಿ ಸ್ನೇಹಿತರ ನಡುವೆ ಯಾವುದೋ ಒಂದು ಕಾರಣಕ್ಕೆ ವೈರತ್ವ ಬೆಳೆದಿತ್ತು. ಅಂದರೆ ದರ್ಶನ್ ಹಾಗೂ ಸುದೀಪ್ ಅವರು ನಡುವಿದ್ದ ವೈರತ್ವ ಮೊನ್ನೆ ಈ ಘಟನೆಯಿಂದ ದೂರಾಯಿತು. ಈ ಘಟನೆಯ ಕುರಿತು ಸುದೀಪ್ ಅವರು ತಮ್ಮ ಟ್ವಿಟ್ಟರ್ ಮುಖಾಂತರ ಈ ಘಟನೆಯ ಬಗ್ಗೆ ವಿರೋಧ ವ್ಯಕ್ತ ಪಡಿಸಿ ಕೊನೆಗೆ ‘ ದರ್ಶನ್ ನಿಮ್ಮೊಂದಿಗೆ ನಾನಿದ್ದೇನೆ’ ಎಂದು ಟ್ವೀಟ್ ಮಾಡಿದ್ದರು. ಇದನ್ನು ಅರಿತ ದರ್ಶನ್ ಅವರು ಮರುಟ್ವೀಟ್ ಆಗಿ ನಿಮ್ಮ ಆ ಸಾಲುಗಳಿಗಾಗಿ ತುಂಬಾ ಧನ್ಯವಾದಗಳು ಎಂದು ಬರೆದಿದ್ದರು. ಒಟ್ಟಾರೆಯಾಗಿ ದರ್ಶನ ಹಾಗೂ ಸುದೀಪ್ ಅವರು ಮತ್ತೆ ಒಂದಾಗಿದಕ್ಕೆ ಇಡೀ ರಾಜ್ಯವೇ ಈ ಜೋಡಿಗೆ ಶುಭ ಹಾರೈಸಿದೆ.
ದರ್ಶನ್ ಅವರು ಆ ದಿನ ತಮ್ಮ ಕಾರ್ಯಕ್ರಮ ಮುಗಿಸಿಕೊಂಡು ರಚಿತಾ ರಾಮ್ ಜೊತೆಗೆ ಅಲ್ಲಿಂದ ಹೋಗುವಾಗ ರಚಿತಾ ರಾಮ್ ಅವರ ಮೇಲೆ ಸಹ ಕಿಡಿಗೇಡಿಗಳು ಕೆಟ್ಟ ಕೃತ್ಯ ಎಸಗಿದ್ದಾರೆ ಎಂದು ಕೆಲವು ಸುದ್ದಿಮೂಲಗಳಿಂದ ತಿಳಿದು ಬಂದಿದೆ. ರಚಿತಾ ರಾಮ್ ಅವರು ಅಲ್ಲಿಂದ ತಮ್ಮ ಗಾಡಿ ಪಾರ್ಕ್ ಮಾಡಿರುವ ಸ್ಥಳದ ವರೆಗೆ ಅಭಿಮಾನಿಗಳ ಮಧ್ಯದಿಂದ ಹೋಗುವಾಗ ಕಿಡಿಗೇಡಿಗಳು ಅವರ ಮೈ, ಕೈ ಮುಟ್ಟಿ ಕೆಟ್ಟ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆಯ ಒಂದು ತುಣುಕು ಯೂಟ್ಯೂಬ್ ನಲ್ಲಿ ಶೇರ್ ಮಾಡಲಾಗಿದೆ.
ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ