ಮಾಹಿತಿಯ ಪ್ರಕಾರ ಮಹಾರಾಷ್ಟ್ರದ ಆರೋಗ್ಯ ಇಲಾಖೆ ಜನರಿಗೆ ಕಾಂಡೋಮ್ ಪ್ಯಾಕೆಟ್ ಗಳನ್ನು ವಿತರಿಸುತ್ತಿದೆ. ಜೊತೆಗೆ ಮುಂದಿನ ನಾಲ್ಕು ತಿಂಗಳು ಗರ್ಭಿಣಿಯಾಗದಂತೆ ಮಹಿಳೆಯರಲ್ಲಿ ಮನವಿ ಮಾಡಿಕೊಳ್ಳುತ್ತಿದೆ. ಕಾರಣ ಏನು ಅಂತ ನೋಡುವುದಾದರೆ, ಝಿಕಾ ವೈರಸ್ (Zika Virus) ಆತಂಕ! ಕರೋನಾ ಸಾಂಕ್ರಾಮಿಕದ ಭೀ’ತಿಯ ನಡುವೆ ಮಾ’ರ’ಣಾಂ’ತಿಕ ವೈರಸ್ ಜೀಕಾ ಕೂಡ ದೇಶದಲ್ಲಿ ಆವರಿಸುತ್ತಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರದ ಆರೋಗ್ಯ ಇಲಾಖೆ ಎ’ಚ್ಚರವಹಿಸಿದೆ ಮತ್ತು ಮುಂದಿನ ನಾಲ್ಕು ತಿಂಗಳವರೆಗೆ ಗರ್ಭಿಣಿಯಾಗದಂತೆ ಮಹಿಳೆಯರಿಗೆ ಮನವಿ ಮಾಡುತ್ತಿದೆ.
ಈ ಗ್ರಾಮದಲ್ಲಿ ವೈರಸ್ ಪ್ರಕರಣ ಬಂದಿದೆ : ಮಾಹಿತಿಯ ಪ್ರಕಾರ ಮಹಾರಾಷ್ಟ್ರದ ಪುಣೆಯ ಬೆಲ್ಸರ್ ಗ್ರಾಮದಲ್ಲಿ ಝಿಕಾ ವೈರಸ್ ಪ್ರಕರಣ ವರದಿಯಾಗಿದೆ. ಅಂದಿನಿಂದ ರಾಜ್ಯದ ಆರೋಗ್ಯ ಇಲಾಖೆ ಎಚ್ಚರವಾಗಿತ್ತು. ಈ ವೈರಸ್ ಮತ್ತಷ್ಟು ಹರಡುವುದನ್ನು ತಪ್ಪಿಸಲು, ಆಡಳಿತದಿಂದ ಜನರಿಗೆ ಕಾಂಡೋಮ್ ಪ್ಯಾಕೆಟ್ ಗಳನ್ನು ವಿತರಿಸಲಾಗುತ್ತಿದೆ. ಇದರೊಂದಿಗೆ ಮುಂದಿನ ನಾಲ್ಕು ತಿಂಗಳು ಗರ್ಭಿಣಿಯಾಗದಂತೆ ಮಹಿಳೆಯರಿಗೂ ಮನವಿ ಮಾಡಲಾಗುತ್ತಿದೆ.
ಈ ಅ’ಪಾ’ಯ’ಕಾ’ರಿ ವೈರಸ್ ಈ ರೀತಿ ಹರಡುತ್ತದೆ : ಬೆಲ್ಸರ್ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯಸ್ಥ ಡಾ.ಭರತ್ ಶಿತೋಲೆ ಪ್ರಕಾರ, ಏಡಿಸ್ ಈಜಿಪ್ಟಿ ಸೊಳ್ಳೆಯ ಕಡಿತದಿಂದ ಝಿಕಾ ವೈರಸ್ ಹರಡುತ್ತದೆ. ಒಬ್ಬ ವ್ಯಕ್ತಿಯು ಆ ಸೋಂಕಿಗೆ ಒಳಗಾಗಿದ್ದರೆ ಅವನು ರಕ್ಷಣೆಯಿಲ್ಲದೆ ಯಾರೊಂದಿಗಾದರೂ ದೈಹಿಕ ಸಂಬಂಧವನ್ನು ಹೊಂದಿದರೆ, ಆಗ ಅವರಿಗೂ ಈ ವೈರಸ್ ಹರಡಬಹುದು. ಇದಕ್ಕೆ ಕಾರಣವೆಂದರೆ ಝಿಕಾ ವೈರಸ್ ಮನುಷ್ಯನ ವೀರ್ಯದಲ್ಲಿ ನಾಲ್ಕು ತಿಂಗಳವರೆಗೆ ಬದುಕುತ್ತದೆ. ಇಂತಹ ಸನ್ನಿವೇಶದಲ್ಲಿ ಆ ಪುರುಷನಿಂದ ಮಹಿಳೆ ಯಾವಾಗ ಗರ್ಭಿಣಿಯಾಗುತ್ತಾಳೆ, ಆಗ ಆಕೆಗೆ ಹಾಗೂ ಹುಟ್ಟಲಿರುವ ಮಗು ಕೂಡ ಈ ರೋಗವನ್ನು ಪಡೆಯಬಹುದು.
ಇವು ರೋಗದ ಲಕ್ಷಣಗಳಾಗಿವೆ : ವೈದ್ಯಕೀಯ ತಜ್ಞರು ಜಿಕಾ ವೈರಸ್ ನ ಲಕ್ಷಣಗಳು ಡೆಂಗ್ಯೂಗೆ ಹೋಲುತ್ತವೆ ಎಂದು ಹೇಳುತ್ತಾರೆ. ಇದರಲ್ಲಿ ಜ್ವರ, ದೇಹದ ಮೇಲೆ ದದ್ದುಗಳು ಮತ್ತು ಕೀಲು ನೋವಿನಂತಹ ಲಕ್ಷಣಗಳು ಕಂಡುಬರುತ್ತವೆ. ತಜ್ಞರ ಪ್ರಕಾರ ಪ್ರಸ್ತುತ ಜಿಕಾ ವೈರಸ್ ಗೆ ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಇಲ್ಲ. ಇದಕ್ಕೆ ಇರುವ ಏಕೈಕ ರಕ್ಷಣೆ ಎಂದರೆ ಎ’ಚ್ಚ’ರಿ’ಕೆ. ಈ ವೈರಸ್ ಮಗುವಿನ ಮೆದುಳಿನ ಬೆಳವಣಿಗೆಗೆ ಅಡ್ಡಿಪಡಿಸುತ್ತದೆ ಮತ್ತು ಅವಧಿಪೂರ್ವ ಹೆರಿಗೆಗೂ ಕಾರಣವಾಗಬಹುದು. ಆದ್ದರಿಂದ ಜಾಗರೂಕರಾಗಿರುವುದು ಬಹಳ ಮುಖ್ಯ.
ಕಾಂಡೋಮ್ ಪ್ಯಾಕೆಟ್ ಗಳನ್ನು ವಿತರಿಸಲಾಗುತ್ತಿದೆ : ಆರೋಗ್ಯ ಇಲಾಖೆಯಿಂದ ಕಾಂಡೋಮ್ ಪ್ಯಾಕೆಟ್ ಗಳನ್ನು ದೊಡ್ಡ ಪ್ರಮಾಣದಲ್ಲಿ ಹಳ್ಳಿಯ ಜನರಿಗೆ ವಿತರಿಸಲಾಗುತ್ತಿದೆ. ಕಾಂಡೋಮ್ ಇಲ್ಲದೆ ಲೈಂಗಿಕ ಕ್ರಿಯೆ ಬೇಡ ಎಂದು ಪುರುಷರಿಗೆ ಮನವಿ ಮಾಡಲಾಗಿದೆ. ಇದರೊಂದಿಗೆ ಮಹಿಳೆಯರಿಗೆ ಮುನ್ನೆಚ್ಚರಿಕೆ ವಹಿಸಲು ಮತ್ತು ಮುಂದಿನ 4 ತಿಂಗಳವರೆಗೆ ಗರ್ಭಿಣಿಯಾಗುವ ಯೋಜನೆಯನ್ನು ಮುಂದೂಡುವಂತೆ ಮನವಿ ಮಾಡಲಾಗುತ್ತಿದೆ. ಜನರು ಭಯಪಡದಿರಲು, ಇದು ತಾತ್ಕಾಲಿಕ ಹಂತವಾಗಿದೆ ಮತ್ತು ಶೀಘ್ರದಲ್ಲೇ ಮುಗಿಯಲಿದೆ ಎಂದು ಆಡಳಿತವು ಹೇಳಿದೆ.