ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಭಿನಯಿಸಿದ್ದ ರಾಜಕುಮಾರ ಹಾಗೂ ಅಪ್ಪು ಅವರ ಕೊನೆಯ ಚಿತ್ರ ಜೇಮ್ಸ್ ಸಿನಿಮಾದಲ್ಲಿ ಕೂಡ ನಟಿಸಿದ್ದ ನಟಿ ಪ್ರಿಯ ಆನಂದ್ ಅವರು ಇದೀಗ ಒಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಜೊತೆಗೆ ಅಷ್ಟೇ ತಮಾಷೆ ಕೂಡ ಆಗಿದೆ ಅದು ಎನ್ನಬಹುದು. ಜೊತೆಗೆ ಟ್ರೋಲ್ ಕೂಡ ಆಗುತ್ತಿದ್ದಾರೆ ಹೌದು ನಟಿ ಪ್ರಿಯಾ ಆನಂದ್. ಹೌದು ಆಗಾಗ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟಿವ್ ಆಗಿರುವಂತಹ ನಟಿ ಪ್ರಿಯಾ ಆನಂದ್ ಅವರು ಕೆಲವೊಂದಿಷ್ಟು ಫೋಟೋಸ್ ಮತ್ತು ಸಿನಿಮಾ ವಿಚಾರವಾಗಿ ಹಂಚಿಕೊಳ್ಳುವ ಪೋಸ್ಟ್ ಅಭಿಮಾನಿಗಳಿಗೆ ತುಂಬಾ ಹತ್ತಿರ ಆಗುತ್ತವೆ. ನಟಿ ಪ್ರಿಯಾ ಆನಂದ್ ಅವರು ಕನ್ನಡಿಗರಿಗೆ ಮನೆ ಮಾತಾದ ನಟಿ.
ಅಪ್ಪು ಜೊತೆ ಅಭಿನಯಿಸಿದ್ದ ಮೇಲೆ ಕನ್ನಡಿಗರಿಗೆ ಹತ್ತಿರ ಅಗಿದ್ದರು. ಅಷ್ಟೇ ಅಭಿಮಾನ ಇಟ್ಟುಕೊಂಡವರುಜೊತೆಗೆ ಅಷ್ಟೇ ಅಭಿಮಾನಿಗಳು ಕೂಡ ಅವರಿಗೆ ಇದ್ದಾರೆ ಎಂದು ಹೇಳಬಹುದು. ನಟಿ ಪ್ರಿಯಾ ಆನಂದ್ ಅವರಿಗೆ ಇತ್ತೀಚಿಗೆ ದೇವಮಾನವ ನಿತ್ಯಾನಂದ ಅವರ ವಿಚಾರವಾಗಿ ಸಂದರ್ಶನ ನಡೆಸಲಾಯಿತು. ಆಗ ನಿತ್ಯಾನಂದ ಅವರ ವಿಚಾರವಾಗಿ ಕೇಳಿದ ಪ್ರಶ್ನೆಗೆ, ನಿತ್ಯಾನಂದ ಅವರು ಹೇಳುವ ಕೆಲವೊಂದಿಷ್ಟು ಸಾಲುಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಅದೇ ವಿಚಾರವಾಗಿ ಪ್ರಶ್ನೆ ಮಾಡಿದರೆ, ನಿತ್ಯಾನಂದ ಅವರಿಗೆ ಜನರನ್ನು ಹೇಗೆ ಆಕರ್ಷಣೆ ಮಾಡಬೇಕು ಎಂದು ತಿಳಿದಿದೆ.
ಜೊತೆಗೆ ಇಷ್ಟು ಜನರು ಅವರನ್ನು ಫಾಲೋ ಮಾಡುತ್ತಿದ್ದಾರೆ ಎಂದರೆ ಅವರಲ್ಲಿ ಏನು ಇರಬೇಕು ಅಲ್ಲವಾ, ಒಂದು ವೇಳೆ ನಾನು ಅವರನ್ನು ಮದುವೆಯಾದರೆ ನನ್ನ ಹೆಸರನ್ನು ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ, ಕಾರಣ ಪ್ರಿಯ ಆನಂದ್ ಎರಡರಲ್ಲಿಯೂ ಇದೆ ನನಗೆ ನಿತ್ಯಾನಂದ ಅವರು ಎಂದರೆ ಇಷ್ಟ ಎಂಬುದಾಗಿ ಹೇಳಿದ್ದಾರೆ ಎನ್ನಲಾಗಿದೆಇವರ ಹೇಳಿಕೆ ಇದು ಕೆಲವರಲ್ಲಿ ನಗು ತರಿಸಿದರೆ, ಇನ್ನು ಕೆಲವರು ಇದೇ ವಿಡಿಯೋವನ್ನು ಇಟ್ಟುಕೊಂಡು ಹೆಚ್ಚು ಟ್ರೋಲ್ ಕೂಡ ಮಾಡುತ್ತಿದ್ದಾರೆ. ಹೌದು ದೇವಮಾನವ ಸ್ವಯಂಘೋಷಿತ ಸ್ವಾಮೀಜಿ ನಿತ್ಯಾನಂದ ಈಗಾಗಲೇ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಸುದ್ದಿ ಆಗಿದ್ದಾರೆ. ಹಾಗೆ ಪೊಲೀಸರು ಸಹ ಇವರ ಹುಡುಕಾಟದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಕೈಲಾಸ ದೇಶದ ಅಭಿವೃದ್ಧಿ ಮಾಡಲು ಹೋಗಿದ್ದು ನಿತ್ಯಾನಂದ ಕಣ್ಮರೆ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ನಟಿ ಪ್ರಿಯಾ ಆನಂದ್ ಅವರ ಈ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..