ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಿರ್ದೇಶಕರಾಗಿರುವ ಓಂ ಪ್ರಕಾಶ್ ಅವರ ಬಗ್ಗೆ ಎಲ್ಲರಿಗೂ ಗೊತ್ತು ಇದುವರೆಗೆ 45ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಓಂ ಪ್ರಕಾಶ್ ಒಬ್ಬ ಫೇಮಸ್ ನಿರ್ದೇಶಕರು. ಕನ್ನಡ ನಟಿಯರು ಮಾತ್ರವಲ್ಲದೆ ಇತರ ಭಾಷಾ ಕಲಾವಿದರನ್ನು ಕೂಡ ಕನ್ನಡಕ್ಕೆ ಪರಿಚಯ ಮಾಡಿಸಿದ ನಿರ್ದೇಶಕರಲ್ಲಿ ಓಂ ಪ್ರಕಾಶ್ ಕೂಡ ಒಬ್ಬರು. ಉದಾಹರಣೆಗೆ ಕಿಚ್ಚ ಸುದೀಪ್ ಅಭಿನಯದ ಹುಚ್ಚ ಸಿನಿಮಾದ ಹೀರೋಯಿನ್ ಆಗಿರುವ ರೇಖಾ ಇರಬಹುದು, ದರ್ಶನ್ ಜೊತೆ ಜೊತೆ ಅಭಿನಯಿಸಿದ ನಿಖಿತ ಇರಬಹುದು.
ಕಲಾವಿದಯರನ್ನ ತಪ್ಪಾಗಿ ಬಳಸಿಕೊಳ್ಳುತ್ತಾರೆ ಎನ್ನುವ ಆರೋಪ ಕೂಡ ಓಂ ಪ್ರಕಾಶ್ ಅವರ ಮೇಲೆ ಇದೆ ಈ ಎಲ್ಲದರ ಬಗ್ಗೆ ನಿರ್ದೇಶಕ ಓಂ ಪ್ರಕಾಶ್ ಅವರು ಓಪನ್ ಆಗಿ ಮಾತನಾಡಿದ್ದಾರೆ. ನಿರ್ದೇಶಕ ಓಂ ಪ್ರಕಾಶ್ ಅವರು ನಾನು ಯಾರಾದರೂ ಕಲಾವಿದೆಯರನ್ನ ಮಂಚಕ್ಕೆ ಕರೆದಿದ್ದೇನೆ ಅಂತ ಅವರಾಗಿ ಹೇಳಿದರೆ, ಯಾವ ಶಿಕ್ಷೆ ಬೇಕಾದರೂ ಅನುಭವಿಸುವುದಕ್ಕೆ ಸಿದ್ಧ ಅಂತ ಹೇಳಿದ್ದಾರೆ. ಇನ್ನು ಇಂತಹ ಘಟನೆಗೆ ಸಂಬಂಧಪಟ್ಟ ಹಾಗೆ ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ ಓಂ ಪ್ರಕಾಶ್.
ಪಾರ್ಥ ಸಿನಿಮಾವನ್ನು ನಿರ್ದೇಶನ ಮಾಡಿರುವವರು ಓಂ ಪ್ರಕಾಶ್. ಈ ಸಿನಿಮಾದಲ್ಲಿ ಸುದೀಪ್ ಹಾಗೂ ಮುಂಬೈನ ಹುಡುಗಿ ಹರದೀಪ್ ಅಭಿನಯಿಸಿದ್ರು. ಒಂದು ಕ್ಲೈಮ್ಯಾಕ್ಸ್ ಸೀನ್ ನ ಸಂದರ್ಭದಲ್ಲಿ ನಾಯಕಿ ನಟಿ ಅಸಿಸ್ಟೆಂಟ್ ಡೈರೆಕ್ಟರ್ ಹೇಳುತ್ತಿರುವ ಡೈಲಾಗ್ ಕೇಳದೆ ಫೋನಿನಲ್ಲಿ ಮಾತನಾಡುತ್ತಾ ಇದ್ದದನ್ನ ಓಂ ಪ್ರಕಾಶ್ ಗಮನಿಸಿದರು. ಈ ಸಿನಿಮಾದ ಆರಂಭದಿಂದಲೂ ಆಕೆಗೆ ಹೆಚ್ಚು ಸಿನಿಮಾದ ಕಡೆಗೆ ಕಾನ್ಸನ್ಟ್ರೇಟ್ ಮಾಡಲು ಓಂ ಪ್ರಕಾಶ್ ಹೇಳಿದ್ದರಂತೆ.
ಆದರೆ ಆಕೆ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ ಕೊನೆಗೆ ಕ್ಲೈಮ್ಯಾಕ್ಸ್ ಸೀನ್ ಬಂದಾಗ ನೀನು ಹೀಗೆ ಫೋನ್ ನಲ್ಲಿ ಮಾತನಾಡುತ್ತಿದ್ದರೆ ಆಕ್ಟಿಂಗ್ ಹೇಗೆ ಮಾಡ್ತೀಯಾ ಅಂತ ಕೇಳುತ್ತಾರೆ. ಅದಕ್ಕೆ ನಾನು ಡೈಲಾಗ್ ಹೇಳೋಕೆ ಸಿದ್ಧ ಅಂತ ನಾಯಕಿ ನಟಿ ಹೇಳಿದ್ದಾಳೆ. ಶೂಟಿಂಗ್ ಆರಂಭಿಸಿದರೆ ಆಕೆ ಸಿಕ್ಕಾಪಟ್ಟೆ ಟೇಕ್ ತೆಗೆದುಕೊಳ್ಳುತ್ತಾಳೆ. ಇದನ್ನ ನೋಡಿ ಓಂ ಪ್ರಕಾಶ್ ಸಿಕ್ಕಾಪಟ್ಟೆ ಬೈಯುತ್ತಾರೆ. ಆಗ ಅಲ್ಲಿತ ಒಬ್ಬ ಕಲಾವಿದ ಓಂ ಪ್ರಕಾಶ್ ಬಹುಶಃ ರಾತ್ರಿ ಮಂಚಕ್ಕೆ ಕರೆದಿರಬೇಕು ಆಕೆ ಇಲ್ಲ ಎಂದು ಹೇಳಿರಬೇಕು.
ಅದಕ್ಕೆ ಬೈಯುತ್ತಿದ್ದಾರೆ ಎಂದು ಗೆಲ್ಲೆಬ್ಬಿಸುತ್ತಾನೆ. ನಾನು ಹೀಗೆ ಮಂಚಕ್ಕೆ ಕರೆಯೋ ಹಾಗಿದ್ರೆ ಕ್ಲೈಮ್ಯಾಕ್ಸ್ ಸೀನ್ ವರೆಗೂ ಕಾಯಬೇಕಿರಲಿಲ್ಲ ಆ ಕೆಲಸ ಯಾವಾಗಲೂ ಮಾಡಬಹುದು ಅಂತ ಕಲಾವಿದನಿಗೂ ಹಾಗೂ ತನ್ನ ಬಗ್ಗೆ ಮಾತನಾಡಿದವರಿಗು ಚೆನ್ನಾಗಿ ಜಾಡಿಸಿದ್ದರು ಓಂ ಪ್ರಕಾಶ್. ಇಂಥದೇ ಇನ್ನೊಂದು ಘಟನೆಯ ಬಗ್ಗೆ ಓಂ ಪ್ರಕಾಶ್ ಮಾತನಾಡಿದ್ದಾರೆ.
ಸುದೀಪ್ ಅಭಿನಯದ ಹುಚ್ಚ ಸಿನಿಮಾದಲ್ಲಿ ರೇಖಾ ಅಭಿನಯಿಸಿದ್ರು ರೇಖಾ ಅವರನ್ನ ಮೊದಲು ಕನ್ನಡಕ್ಕೆ ಪರಿಚಯಿಸಿದೆ ಓಂ ಪ್ರಕಾಶ್. ಹೀಗಿರುವಾಗ ಶೂಟಿಂಗ್ ಸೆಟ್ ನಲ್ಲಿ ಇಂಗ್ಲಿಷ್ ನಲ್ಲಿ ಸುದೀಪ್ ಒಟ್ಟಿಗೆ ಮಾತನಾಡುತ್ತಾ ಇದ್ದ ರೇಖಾ ಅವರಿಗೆ ನಟನೆಯ ಬಗ್ಗೆ ಹೆಚ್ಚು ಗಮನ ಇರಲಿಲ್ಲ. ಆಗ ಚಿತ್ರೀಕರಣದ ಸಮಯದಲ್ಲಿಯೇ ರೇಖಾ ಅವರಿಗೆ ಹೊಡೆದು ಸರಿಯಾಗಿ ನಟಿಸುವಂತೆ ಹೇಳಿದ್ರು ಓಂ ಪ್ರಕಾಶ್.
ಇದು ಬಹಳ ದೊಡ್ಡ ಸುದ್ದಿಯು ಆಗಿತ್ತು. ಆದರೆ ಕೆಲವು ಸಮಯಗಳ ನಂತರ ರೇಖಾ ಅವರೇ ಸ್ವತಃ ಓಂ ಪ್ರಕಾಶ್ ಅವರ ಬಳಿ ಬಂದು ನಾನು ನಟಿಸಿದ್ದು ಸರಿ ಇರಲಿಲ್ಲ ನನ್ನಿಂದಲೇ ತಪ್ಪಾಗಿದೆ ಅಂತ ಕೇಳಿಕೊಂಡಿದ್ರಂತೆ. ಆದರೆ ಓಂ ಪ್ರಕಾಶ್ ಅವರ ಸಿಟ್ಟು, ಕೋಪ ಅವರ ಬಗ್ಗೆ ಬೆರೆಯದೆ ರೀತಿಯಲ್ಲಿ ಪ್ರಾಜೆಕ್ಟ್ ಮಾಡಿದೆ. ನನ್ನ ಬಗ್ಗೆ ಹೀಗೆ ಯಾಕೆ ಮಾತಾಡ್ತಾರೆ ಅನ್ನೋದು ನನಗೆ ಈಗಲೂ ಅರ್ಥವಾಗುವುದಿಲ್ಲ ಅಂತ ಓಂ ಪ್ರಕಾಶ್ ಸಂದರ್ಶನದಲ್ಲಿ ಹೇಳಿದ್ದಾರೆ.