ಶಾಲೆಯ ದಿನಗಳಲ್ಲೇ ನಟಿ ನೀತು ಶೆಟ್ಟಿ ಅವರು ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಬಳಿಕ ನೀತು ಅವರ ಮೊದಲ ಸಿನಿಮಾ 2004ರಲ್ಲಿ ಯಾಹೂ. ಈ ಚಿತ್ರದ ಬಳಿಕ ಗೋವಿಂದ ಗೋಪಾಲ ಚಿತ್ರ, ಪೂಜಾರಿ, ಮನಸಾರೆ ಹಾಗೂ ಗಾಳಿಪಟದಲ್ಲಿ ನಟಿಸಿದರು. ಇದೀಗ ನೀತು ಅವರು ಸಮಾಜ ಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಸದಾ ಆಕ್ಟೀವ್ ಆಗಿರುವ ನೀತು ಅವರು ಸುಮಾರು 39 ಚಿತ್ರಗಳಲ್ಲಿ ನಟಿಸಿದ್ದಾರೆ.
ನೀತು ಕೂಡ ಸಿನಿಮಾ ಕ್ಷೇತ್ರದಲ್ಲಿ ತಮಗಾದ ಅವಮಾನಗಳ ಬಗ್ಗೆ ಮಾತನಾಡಿದ್ದಾರೆ. ತಾವು ದಪ್ಪಗಿದ್ದಾರೆ ಎಂಬ ಕಾರಣಕ್ಕೆ ಸಿನಿಮಾಗಳ ಆಫರ್ ಸಿಗುತ್ತಿರಲಿಲ್ಲವಂತೆ. ಹಾಗಾಗಿ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳಲು ಮುಂದಾಗಿದ್ದರಂತೆ. ಆಗ ಇದರಿಂದ ತಮಗಾದ ನೋವು, ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ಜನ ಹೇಗೆ ಬಾಡಿ ಶೇಮಿಂಗ್ ಬಗ್ಗೆ ಮಾತನಾಡುತ್ತಾರೆ. ಕನ್ಸರ್ನ್ ನಿಂದಲೇ ಹೇಳಿರಬಹುದು ಬಟ್ ನಮ್ಮ ಮನಸ್ಥಿತಿ ಹೇಗಿರುತ್ತೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು
ಎಂದು ಹೇಳಿದ್ದಾರೆಸುವರ್ಣ ಮನರಂಜಾ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಬೆಂಗಳೂರ್ ಬೆಣ್ಣೆ ದೋಸೆ ಕಾಮಿಡಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ, ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಸ್ಪರ್ಧಿಸಿದ್ದರು. ಸುಮಾರು ಎರಡೂವರೆ ತಿಂಗಳ ಕಾಲ ಇದ್ದರು. ಇನ್ನು ನೀತು ಅವರು ಹಲವು ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಇನ್ನುಇತ್ತೀಚೆಗೆನಟಿ ಚೇತನಾ ರಾಜ್ ಅವರುತೆಳ್ಳಗಾಗುವ ಚಿಕಿತ್ಸೆಯನ್ನುಮಾಡಿಸಿಕೊಳ್ಳಲು ಹೋಗಿ ಸಾವನ್ನಪ್ಪಿದರು. ಈ ಪ್ರಕರಣ ಸಂಬಂಧವೂ ನೀತು ಅವರು ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದರು.