ಕುಟುಂಬಸ್ಥರ ಸಮ್ಮುಖದಲ್ಲೇ ಹಿಂದೂ ಹುಡುಗ-ಮುಸ್ಲಿಂ ಹುಡುಗಿ ವಿವಾಹ

Today News / ಕನ್ನಡ ಸುದ್ದಿಗಳು

ಜಾತಿ ಮತ್ತು ಧರ್ಮದ ಅಡೆತಡೆ ಮುರಿದು ಕೊಲ್ಲಾಪುರದಲ್ಲಿ ಹಿಂದೂ-ಮುಸ್ಲಿಂ ಕುಟುಂಬದ ವಿವಾಹ ಸಮಾರಂಭ ಶನಿವಾರ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪ್ರಗತಿಪರ ವಿಚಾರ ಉತ್ತೇಜಿಸುವ ನಿಟ್ಟಿನಲ್ಲಿ ಈ ಮದುವೆ ಮಾಡಲಾಗಿದ್ದು, ಮುಜಾವರ್​ ಮತ್ತು ಯಾದವ್​ ಕುಟುಂಬಗಳು ಒಟ್ಟಿಗೆ ಸೇರಿ ಈ ಕೆಲಸ ಮಾಡಿವೆ. ಎರಡು ಕುಟುಂಬ ಜಾತಿ ಮತ್ತು ಧರ್ಮದ ಗೋಡೆ ಮುರಿದು ತಮ್ಮ ಮಕ್ಕಳ ಮದುವೆ ಹಿಂದೂ-ಮುಸ್ಲಿಂ ಸಂಪ್ರದಾಯದಂತೆ ಆಚರಿಸಿವೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಿಂದೂ-ಮುಸ್ಲಿಂ ಪ್ರೇಮಿಗಳು

ಹಿಂದೂ ಹುಡುಗ ಹಾಗೂ ಮುಸ್ಲಿಂ ಹುಡುಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದಕ್ಕೆ ಎರಡು ಕುಟುಂಬದಿಂದಲೂ ವಿರೋಧ ವ್ಯಕ್ತವಾಗಿಲ್ಲ. ರಾಜರ್ಷಿ ಶಾಹು ಮಹಾರಾಜ್​​ ಅವರ ಆಲೋಚನೆಯಂತೆ ಮಕ್ಕಳ ವಿವಾಹ ಸಮಾರಂಭ ನಡೆದಿದೆ. ವಿಶೇಷವೆಂದರೆ ಈ ಮದುವೆ ಕಾರ್ಯಕ್ರಮದಲ್ಲಿ ಹಿಂದೂ ಮತ್ತು ಮುಸ್ಲಿಂ ಕುಟುಂಬದ ಮದುವೆ ಆಚರಣೆ ಸಂಪ್ರದಾಯ ನಡೆದಿವೆ.

ಮುಜಾವರ್ ಮತ್ತು ಯಾದವ್ ಕುಟುಂಬ ಕಳೆದ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ಸ್ನೇಹ ಬಂಧ ಮುಂದುವರೆಸುವ ಉದ್ದೇಶದಿಂದ ವಧು ಮಾರ್ಷಾ ನದೀಮ್ ಮುಜಾವರ್ ಮತ್ತು ವರ ಸತ್ಯಜಿತ್ ಸಂಜಯ್ ಯಾದವ್​ ಮದುವೆ ಮಾಡಿಕೊಂಡಿದ್ದಾರೆ. ಇಬ್ಬರು ಕಳೆದ 10 ವರ್ಷಗಳಿಂದ ಮಾರ್ಷಾ ಹಾಗೂ ಸತ್ಯಜಿತ್​ ಉತ್ತಮ ಸ್ನೇಹಿತರಾಗಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಹಿಂದೂ-ಮುಸ್ಲಿಂ ಆಗಿರುವ ಕಾರಣ ಭವಿಷ್ಯದಲ್ಲಿ ಮದುವೆಯಾಗುತ್ತಾರೋ ಇಲ್ಲವೋ ಎಂಬ ಸಂಶಯ ಕೂಡ ವ್ಯಕ್ತವಾಗಿತ್ತು. ಆದರೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ನೀವು ಈ ಒಂದು ಡ್ರಿಂಕನ್ನು ಕುಡಿದರೆ ಸಾಕು ನಿಮ್ಮ ಬೊಜ್ಜು ಒಂದೇ ವಾರದಲ್ಲಿ ಕರಗಿ ನೀರಾಗಿ ಹೊರಹೋಗುತ್ತೆ …!!!!