
Chandra shekar: ಯರಹಂಕದಲ್ಲಿ ನಡೆದಿರುವಂತಹ ಒಂದು ಪ್ರಕರಣ ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಎಲ್ಲಿ ನಡೆದಿರುವಂತಹ ಹೈಡ್ರಾಮಾ ಬೆಳಕಿಗೆ ಬಂದಿದ್ದು ಪೊಲೀಸರು ಕೂಡ ಆಶ್ಚರ್ಯ ಚಕಿತರಾಗಿದ್ದಾರೆ. ಚಂದ್ರಶೇಖರ್ ಎನ್ನುವಾತನ ತಲೆ ಹಾಗೂ ಖಾಸಗಿ ಅಂಗಕ್ಕೆ ಹ’ಲ್ಲೆ ಮಾಡಿ ಆತನನ್ನು ಮುಗಿಸಲಾಗಿತ್ತು. ಆತನ ಪತ್ನಿ ಆಗಿರುವ ಶ್ವೇತ ಕೂಡ ಗಂಡನನ್ನು ಕಳೆದುಕೊಂಡಿರುವ ದುಃಖದಲ್ಲಿ ಬಿಕ್ಕಿಬಿಕ್ಕಿ ಅಳಲು ಪ್ರಾರಂಭಿಸಿದಳು.
ಎಲ್ಲರೂ ಶ್ವೇತಾಳ ಪರಿಸ್ಥಿತಿಯನ್ನು ನೋಡಿ ದುಃಖ ಭರಿತರಾಗಿದ್ದರು. ಆದರೆ ಇದರ ಹಿಂದಿನ ನಿಜವಾದ ಅಸಲಿಯೆತ್ತು ಬೇರೇನೇ ಇತ್ತು. ಚಂದ್ರಶೇಖರ್ ಹಾಗೂ ಶ್ವೇತ ಇಬ್ಬರೂ ಕೂಡ ಆಂಧ್ರ ಮೂಲದವರು ಆಗಿದ್ದರು. ತಮ್ಮ ಅಕ್ಕನ ಮಗಳಾಗಿರುವ ಶ್ವೇತಳನ್ನು ಚಂದ್ರಶೇಖರ್ ಅವರು ಮದುವೆಯಾಗಿ ಬೆಂಗಳೂರಿನ ಯಲಹಂಕದಲ್ಲಿ ಬಂದು ಮಗ್ಗದ ಕೆಲಸ ಮಾಡಿಕೊಂಡು ಸೆಟಲ್ ಆಗಿದ್ದರು.
ಆರಂಭದಲ್ಲಿ ಎಲ್ಲವೂ ಕೂಡ ಚೆನ್ನಾಗಿತ್ತು ಆದರೆ ಬರ್ತಾ ಬರ್ತಾ ಶ್ವೇತಾ ಬೇರೆ ಹುಡುಗನೊಂದಿಗೆ ಬೇಡದ ಸಂಬಂಧವನ್ನು ಇಟ್ಟುಕೊಂಡಿದ್ದಳು. ಶ್ವೇತಾ ಹಾಗೂ ಚಂದ್ರಶೇಖರ್ ನಡುವೆ 16 ವರ್ಷಗಳ ಅಂತರವಿತ್ತು. ಕೊನೆಗೆ ಶ್ವೇತ ತನ್ನ ಗಂಡನನ್ನೇ ಮುಗಿಸಬೇಕು ಎನ್ನುವುದಾಗಿ ಪ್ಲಾನ್ ಹಾಕಿಕೊಳ್ಳುತ್ತಾಳೆ.
ಚಂದ್ರಶೇಖರ್ ನನ್ನು ಕುಟುಂಬದ ಒತ್ತಾಯದ ಮೇರೆಗೆ ಶ್ವೇತ ಮದುವೆಯಾಗಿದ್ದಳು ಆದರೆ ಅದಕ್ಕೂ ಮುನ್ನ ಸುರೇಶ್ ಎನ್ನುವುದನ್ನು ಆಕೆ ಪ್ರೀತಿಸುತ್ತಿದ್ದಳು. ಚಂದ್ರಶೇಖರ್ ನನ್ನು ಮುಗಿಸಬೇಕು ಎನ್ನುವುದಾಗಿ ಪ್ಲಾನ್ ಹಾಕಿಕೊಂಡ ಶ್ವೇತಾ ಸುರೇಶ್ ನನ್ನು ಕರೆಸಿಕೊಳ್ಳುತ್ತಾಳೆ. ಇಬ್ಬರು ಸೇರಿಕೊಂಡು ಸ್ಕೆಚ್ ಹಾಕಿ ಚಂದ್ರಶೇಖರ್ ನನ್ನು ಮುಗಿಸಿದ ಮೇಲೆ ಸುರೇಶ್ ಎಸ್ಕೇಪ್ ಆಗುತ್ತಾನೆ. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ಶ್ವೇತಾಳನ್ನು ಸರಿಯಾಗಿ ವಿಚಾರಣೆ ಮಾಡಿದಾಗ ಸತ್ಯವನ್ನು ಆಕೆ ಬಾಯ್ ಬಿಡುತ್ತಾಳೆ.
ಮದುವೆಯಾದ ನಂತರ ನಮ್ಮ ನಡುವೆ ಎಲ್ಲವೂ ಕೂಡ ಸರಿಯಾಗಿಲ್ಲ ಎಂಬುದಾಗಿ ಪ್ರಕರಣದಲ್ಲಿ ಶ್ವೇತ ಬಾಯಿಬಿಟ್ಟಿದ್ದು ತನ್ನ ಇನ್ನೊಬ್ಬ ಪ್ರಿಯಕರನ ಬಗ್ಗೆ ಕೂಡ ಈ ಪ್ರಕರಣದಲ್ಲಿ ವಿಚಾರಣೆಯ ಸಂದರ್ಭದಲ್ಲಿ ಬಾಯಿಬಿಟ್ಟಿದ್ದಾಳೆ. ನಿಜಕ್ಕೂ ಕೂಡ ಆತ ಬಾಳಿ ಬದುಕಬೇಕಾಗಿತ್ತು ಆದರೆ ಇವರಿಬ್ಬರ ಈ ಕೃತ್ಯದಿಂದ ಆತ ತನ್ನ ಪ್ರಾಣವನ್ನೇ ಕಳೆದುಕೊಳ್ಳಬೇಕಾಗಿ ಬಂತು. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.
Comments are closed.