
ಎಷ್ಟೇ ಒಳ್ಳೆಯ ಅಭಿನಯ ಬಂದರೂ ಸಹ ಕೆಲವೊಮ್ಮೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವುದು ತುಂಬಾ ಕಷ್ಟ. ಕೆಲವೊಮ್ಮೆ ಪ್ರತಿಭಾನ್ವಿತರಿಗೂ ಸಹ ವಂಚನೆ ಆಗುತ್ತದೆ. ಅಂತಹದ್ದೇ ಒಂದು ವಿಷಯವನ್ನು ನಾವು ಇಲ್ಲಿ ತಿಳಿಸುತ್ತಿದ್ದೇವೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕವಿತಾ ಗೌಡ ಅವರು ಎಲ್ಲರಿಗೂ ಸಹ ಪರಿಚಿತರೆ. ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆಯನ್ನು ಮಾಡಿದಂತಹ ಕವಿತ ಗೌಡ ಅವರ ಪ್ರಾರಂಭದ ದಿನಗಳು ಅಷ್ಟೇನೂ ಚೆನ್ನಾಗಿರಲಿಲ್ಲ, ಇವರು ನಟಿಸಿದಂತಹ ಮೊದಲಾಧಾರವಾಹಿ ಎಂದರೆ ಅದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಲಕ್ಷ್ಮೀ ಬಾರಮ್ಮ ಈ ಧಾರವಾಹಿ ಈ ಮೂಲಕ ಕವಿತಾ ಗೌಡ ಅವರು ಜನರಿಗೆ ಪರಿಚಿತರಾದರು. ಅಷ್ಟೇ ಅಲ್ಲದೆ ಈ ಧಾರವಾಹಿಯಲ್ಲಿ ಕೊ ಆರ್ಟಿಸ್ಟ್ ಆದಂತಹ ಚಂದನ್ ಕುಮಾರ್ ಅವರ ಜೊತೆ ವೈವಾಹಿಕ ಜೀವನವಕ್ಕೆ ಕಾಲಿಟ್ಟರು.
ಈ ಒಂದು ಧಾರಾವಾಹಿಯಲ್ಲಿ ಚಿನ್ನು ಎನ್ನುವಂತಹ ಪಾತ್ರಧಾರಿಯಾದ ಕವಿತಾ ಗೌಡ ಅವರು ಉತ್ತಮವಾದ ಅಭಿನಯದ ಮೂಲಕ ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡರು. ಚಂದನವನದಲ್ಲಿ ನಟಿಯಾಗಿ ಸ್ಥಾನ ಗಿಟ್ಟಿಸಿಕೊಂಡಿರುವಂತಹ ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಿನ್ನು ಅವರು ಬಹಳಷ್ಟು ಅಭಿಮಾನಿಗಳನ್ನು ಕರ್ನಾಟಕದಲ್ಲಿ ಒಳಗೊಂಡಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ನಟಿಸುತ್ತಿರುವಂತಹ ಸಂದರ್ಭದಲ್ಲಿ ಇವರಿಗೆ ಒಂದು ಸಿನಿಮ ಆಫರ್ ಬಂದಿತ್ತು. ನಿರ್ದೇಶಕರ ಮ್ಯಾನೇಜರ್ ಒಬ್ಬರು ಇವರು ಇರುವಂತಹ ಸ-ಟ್ ಗೆ ನಮ್ಮ ನಿರ್ಮಾಪಕರು ನಿಮ್ಮಿಂದ ಬೇರೆ ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಹೇಳುತ್ತಾರೆ ನಿಮಗೆ ಎಷ್ಟು ಬೇಕಾದರೂ ಹಣವನ್ನು ನೀಡುತ್ತಾರೆ ಅವರು ಹೇಳಿದ ಹಾಗೆ ನೀವು ಕೇಳಬೇಕು ಎಂದು ಆ ಮ್ಯಾನೇಜರ್ ಹೇಳಿದರು ಅದಕ್ಕೆ ಕವಿತಾ ಗೌಡ ಚೆನ್ನಾಗಿ ಬೈದು ಸೆಟ್ ನಿಂದ ಹೊರಗೆ ಹಾಕುತ್ತಾರೆ.
Comments are closed.