
ಸರ್ಕಾರವು ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಉಚಿತವಾಗಿ ಬೋರ್ವೆಲ್ ಹಾಕಿಸಿಕೊಡುವ ಗಂಗಾ ಕಲ್ಯಾಣ ಯೋಜನೆ ಕೂಡ ಒಂದು. ವಿವಿಧ ನಿಗಮ ಹಾಗೂ ಸಮುದಾಯಕ್ಕೆ ಸೇರಿದ ಸಣ್ಣ ಹಾಗೂ ಅತಿ ಸಣ್ಣ ರೈತರಿಂದ ಗಂಗಾ ಕಲ್ಯಾಣ ಯೋಜನೆಯಡಿ ವಿವಿಧ ಹೆಸರಿನಿಂದ ಅರ್ಜಿ ಆಹ್ವಾನಿಸಿ ಅರ್ಹರಿಗೆ ಈ ಯೋಜನೆ ತಲುಪಿಸಲಾಗುತ್ತಿತ್ತು.
ಅದಕ್ಕಾಗಿ ಪ್ರತಿ ವರ್ಷವೂ ಕೂಡ ಅರ್ಜಿ ಆಹ್ವಾನಿಸಲಾಗುತ್ತದೆ. ಈ ಬಾರಿ ಯಾರೆಲ್ಲಾ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ ಆ ರೈತರಿಗೆ ಸರ್ಕಾರದ ವತಿಯಿಂದ ಇನ್ನೊಂದು ಅವಕಾಶ ಸಿಗುತ್ತಿದೆ. ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 30ರಂದು ಕಡೆ ದಿನಾಂಕವಾಗಿತ್ತು, ಈಗ ಯೋಜನೆಯನ್ನು ಇನ್ನಷ್ಟು ರೈತರಿಗೆ ತಲುಪಿಸುವ ಉದ್ದೇಶದಿಂದ ನವೆಂಬರ್ 10ರವರೆಗೂ ಗಡುವನ್ನು ವಿಸ್ತರಿಸಲಾಗಿದೆ.
Comments are closed.