ಮಧ್ಯಪ್ರದೇಶ: ಜಬಲ್ಪುರದ ಪೋಷಕರು ತಮ್ಮ ಜೀವಂತ ಮಗಳ (ಅನಾಮಿಕಾ ದುಬೆ) ಪಿಂಡ ದಾನ ಮಾಡಿದ್ದಾರೆ. ಮಗಳು ಸಮಾಜದಲ್ಲಿ ನಮ್ಮ ಗೌರವವನ್ನು ಹಾಳು ಮಾಡಿದ್ದಾಳೆ ಎಂದು ಅವರು ಹೇಳುತ್ತಾರೆ. ವಾಸ್ತವವಾಗಿ ಈ ವರ್ಷದ ಜನವರಿಯಲ್ಲಿ ಅನಾಮಿಕಾ ದುಬೆ ಮೊಹಮ್ಮದ್ ಅಯಾಜ್ ಎಂಬ ಯುವಕನನ್ನು ವಿವಾಹವಾಗಿದ್ದರು. ಇದರಿಂದ ಸಂಬಂಧಿಕರು ಆಕ್ರೋಶಗೊಂಡಿದ್ದಾರೆ. ಅಂತಿಮವಾಗಿ ಗ್ವಾರಿಘಾಟ್ನ ಸಿದ್ಧಘಾಟ್ನಲ್ಲಿ ಸಂಬಂಧಿಕರು ಅನಾಮಿಕಾ ಹೆಸರಿನಲ್ಲಿ ತಿಥಿ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು.
ಕೆಲ ದಿನಗಳ ಹಿಂದೆ ಮದುವೆಯ ಆರತಕ್ಷತೆ ಕಾರ್ಡ್ ಎದುರಿಗೆ ಬಂದಾಗ ಬಾಲಕಿ ತನ್ನ ಹೆಸರನ್ನು ಫಾತಿಮಾ ಎಂದು ಬದಲಾಯಿಸಿಕೊಂಡಿರುವ ವಿಷಯ ಪೋಷಕರಿಗೆ ತಿಳಿದು ಬಂದಿದೆ. ಈ ಪ್ರೇಮವಿವಾಹದಿಂದ ಕುಪಿತಗೊಂಡ ಮನೆಯವರು ಅನಾಮಿಕಾ ಸಾವಿಗೀಡಾಗಿದ್ದಾಳೆ, ಎಂದು ಸಂಬಂಧಿಕರು ಮತ್ತು ಪರಿಚಯಸ್ಥರಿಗೆ ಸಂತಾಪ ಸೂಚಿಸಿದ್ದಾರೆ. ಈ ತಿಥಿ ಕಾರ್ಡ್ ಪ್ರಕಾರ ಜೂನ್ 2 ರ ಭಾನುವಾರದಂದು ಅನಾಮಿಕಾ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ.
ಸಂತಾಪ ಸಂದೇಶದಲ್ಲಿ ಸಂಬಂಧಿಕರ ಅಸಮಾಧಾನ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಸಂದೇಶದಲ್ಲಿ ಪೋಷಕರು ಅನಾಮಿಕಾಗೆ ಕುಪುತ್ರಿ ಮತ್ತು ನರಕವಾಸಿ ಪದಗಳನ್ನು ಬಳಸಿದ್ದಾರೆ. ಅನಾಮಿಕಾ ದುಬೆ (22) ಮತ್ತು ಮೊಹಮ್ಮದ್ ಅಯಾಜ್ (25) ಈ ವರ್ಷದ ಜನವರಿಯಲ್ಲಿ ವಿವಾಹವಾಗಿದ್ದರು. ಅನಾಮಿಕಾ ಮತ್ತು ಅಯಾಜ್ 12ನೇ ತರಗತಿವರೆಗೆ ಒಂದೇ ಶಾಲೆಯಲ್ಲಿ ಓದಿದ್ದು, ನಂತರ ಇಬ್ಬರೂ ಪ್ರೇಮಿಸಿ ಮದುವೆಯಾದರು.
ಇದರಿಂದ ಸಂಬಂಧಿಕರು ಕೋಪಗೊಂಡಿದ್ದಾರೆ. ಈ ಮದುವೆ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಸಂಬಂಧಿಕರು ಹೇಳಿದ್ದಾರೆ. ಆದರೆ ಹೆಚ್ಚುವರಿ ಜಿಲ್ಲಾಧಿಕಾರಿ ವಿಮಲೇಶ್ ಸಿಂಗ್ ಪ್ರಕಾರ, ಮದುವೆಯ ನೋಂದಣಿಗೆ ಮೊದಲು ಹುಡುಗಿ ಮತ್ತು ಹುಡುಗನ ಕುಟುಂಬ ಸದಸ್ಯರಿಗೆ ತಿಳಿಸಲಾಗಿದೆ, ಪೊಲೀಸ್ ಠಾಣೆಗೂ ಮಾಹಿತಿ ನೀಡಲಾಗಿತ್ತು. ಈ ನಡುವೆಯೂ ಹಿಂದೂ ಸಂಘಟನೆಗಳು ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದವು, ಸಂಘಟನೆಗಳು ಇದನ್ನು ಲವ್ ಜಿಹಾದ್ ಎಂದು ಕರೆಯುತ್ತಿವೆ.
ತಾಯಿ ಹೇಳಿದರು “ಮಗಳು ಸುಳ್ಳು ಹೇಳಿದ್ದಾಳೆ”: ಅನಾಮಿಕಾ ದುಬೆ ಅವರ ತಾಯಿ ಅನ್ನಪೂರ್ಣ ದುಬೆ ಹೇಳುತ್ತಾರೆ, “ನಾವು ಅವಳ ಮದುವೆಗೆ ಒಪ್ಪಿದ್ದೇವೆ ಎಂದು ಮಗಳು ಸುಳ್ಳು ಹೇಳಿದ್ದಾಳೆ. ಅವಳ ನಡೆಯಿಂದ ನನಗೆ ಅತೀವ ದುಃಖವಾಗಿದೆ. ಅವರ ತಂದೆ ಆಘಾತಕ್ಕೊಳಗಾಗಿದ್ದಾರೆ. ಆಕೆ ಮುಸಲ್ಮಾನನನ್ನು ಮದುವೆಯಾಗಿದ್ದಾಳೆ ಎಂಬುದೂ ನಮಗೆ ಗೊತ್ತಿರಲಿಲ್ಲ. ಜನವರಿ 2ರಂದು ಮನೆಯಿಂದ ಹೊರ ಹೋದಾಗ ಗೊತ್ತಾಗಿದೆ.
ಮಗಳು ಮದುವೆಯಾಗಿದ್ದಕ್ಕಿಂತ ಮದುವೆಯ ನಂತರದ ಆರತಕ್ಷತೆಯ ಆಮಂತ್ರಣ ಪತ್ರಿಕೆಯಲ್ಲಿ “ಹಿಂದೂ ಹುಡುಗಿ ತನ್ನ ಧರ್ಮವನ್ನು ಬದಲಿಸಿ ಮುಸ್ಲಿಂ ಆಗಿದ್ದಾಳೆ” ಎಂದು ಪ್ರಿಂಟ್ ಮಾಡಲಾಗಿತ್ತು, ಇದನ್ನು ನೋಡಿಯೇ ಹುಡುಗಿಯ ಕುಟುಂಬದವರಿಗೆ ಆಕ್ರೋಶ ಬಂದಿದೆ. ಪ್ರೀತಿಸಿ ಮದುವೆಯಾಗುವುದಾದರೆ ಮತಾಂತರ ಮಾಡುವ ಅಗತ್ಯವೇನಿತ್ತು, ‘ಲವ್ ಜಿಹಾದ್’ ಸಂಚು ರೂಪಿಸಿಯೇ ಈ ಮದುವೆ ಮಾಡಲಾಗಿದೆ ಎಂದು ಕುಟುಂಬದವರು ಆರೋಪಿಸುತ್ತಿದ್ದಾರೆ.
ಇದೇ ಕಾರಣಕ್ಕೆ ಜಬಲ್ಪುರದ ಬ್ರಾಹ್ಮಣ ಕುಟುಂಬ ನಿನ್ನೆ ಭಾನುವಾರ ಪವಿತ್ರ ನರ್ಮದಾ ನದಿಯ ಗ್ವಾರಿಘಾಟ್ ನಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸಿದರು. ಆ ಮದುವೆ ಕಾರ್ಡಿಗೆ ಪ್ರತಿಯಾಗಿ “ಏಪ್ರಿಲ್ 2 ರಂದು ನಮ್ಮ ಮಗಳು ಸಾವನ್ನಪ್ಪಿದ್ದಾಳೆ” ಎಂದು ಕಾರ್ಡ್ ಮುದ್ರಿಸಿ ಸಂಬಂಧಿಕರಿಗೆ ಮತ್ತು ಸುತ್ತಮುತ್ತಲಿನ ಜನರಿಗೆ ವಿತರಿಸಿದರು. ಮಗಳು ಬದುಕಿರುವಾಗಲೇ ಪಿಂಡ ಪ್ರಧಾನ ಮಾಡಿ ತಿಥಿ ಊಟವನ್ನೂ ಹಾಕಿಸಿದ್ದಾರೆ!
ಪಾಲಕರ ಈ ನಡೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.