ನಮಸ್ಕಾರ ಸ್ನೇಹಿತರೇ ಕ್ನನಡ ಚಿತ್ರರಂಗ ಒಂದು ದೊಡ್ಡ ಸಮುದ್ರ ಇದ್ದ ಹಾಗೆ. ಸಮುದ್ರಕ್ಕೆ ನದಿಗಳು ನ್ಸೇರುವ ಹಾಗೆ ಸಾಕಷ್ಟು ಬೇರೆ ಬೇರೆ ಭಾಷೆಯ ನಟ ನಟಿಯರು ಕನ್ನಡಕ್ಕೆ ಬಂದು ಇಲ್ಲಿಯೇ ನೆಲೆಯೂರಿದ್ದಾರೆ. ಇನ್ನೂ ಕೆಲವರು ಹೇಳ ಹೆಸರಿಲ್ಲದಂತೆ ಕಳೆದುಹೋಗಿದ್ದಾರೆ. ಚಂದನವನದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆಹೊಡೆಯುವಂಥ ಹಿಟ್ ಸಿನಿಮಾಗಳನ್ನು ಕೊಡುವ ಸ್ಟಾರ್ ನಟರಿಗೇನೂ ಕೊರತೆಯಿಲ್ಲ. ಹಾಗಾಗಿ ಇಂಥ ಸ್ಟಾರ್ ನಟರೊಂದಿಗೆ ಅಭಿನಯಿಸಲು ಹಲವು ಹೊಸ ನಾಯಕಿಯರನ್ನು ಕರೆತರಲಾಗುತ್ತದೆ. ಹಾಗೆ ಕನ್ನಡದವರೇ ಆದ, ಕನ್ನಡ ಹಾಗೂ ಇತರ ಭಾಷೆಗಳಲ್ಲಿಯೂ ನಟಿಸಿದ ನಟಿ ದೀಪಾ ಸನ್ನಿಧಿ!
ಚಿಕ್ಕಮಗಳೂರಿನ ನಟಿ ದೀಪಾ ಸನ್ನಿಧಿ ಹುಟ್ಟಿದ್ದು 1990ರಲ್ಲಿ. ಇವರು ಓದುತ್ತಿರುವಾಗಲೇ ಮಾಡಲಿಂಗ್ ಕ್ಷೇತ್ರಕ್ಕೂ ಕಾಲಿಟ್ಟರು. ಆ ಮೂಲಕ ನಟನೆಗೂ ಪಾದಾರ್ಪಣೆ ಮಾಡಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಸಾರಥಿ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡ ದೀಪಾ ಸನ್ನಿಧಿ ಅಲ್ಲಿಂದ ಕನ್ನಡ ಚಿತ್ರರಂಗದಲ್ಲಿ ಯಶಸ್ವಿಯಾಗಿ ತಮ್ಮ ಖಾತೆ ತೆರೆದರು. ಇದಾದ ಬಳಿಕ ಪುನೀತ್ ರಾಜಕುಮಾರ್ ಜೊತೆ ಪರಮಾತ್ಮ ಚಿತ್ರದಲ್ಲಿ ಅವರ ವಿಭಿನ್ನ ಪಾತ್ರ ಜನರನ್ನು ಸೆಳೆಯಿತು. ನಂತರ ನಟ ಯಶ್, ಗಣೇಶ್ ಅವರುಗಳ ಜೊತೆ ತೆರೆ ಹಂಚಿಕೊಂಡು ಕನ್ನಡಾಭಿಮಾನಿಗಳನ್ನು ರಂಜಿಸಿದರು.
ನಂತರ ತೆಲುಗು ಚಿತ್ರಗಳಲ್ಲಿಯೂ ಅಭಿನಯಿಸಿದ ದೀಪಾ ಸನ್ನಿಧಿ ನ್ಧಾನವಾಗಿ ಕನ್ನಡ ಚಿತ್ರರಂಗದಿಂದ ದೂರವಾದರು. ಇದಕ್ಕೆ ಕಾರಣ ಏನು ಗೊತ್ತಾ? ಪ್ರೀತಿ. ಹೌದು ಸ್ನೇಹಿತರೆ, ತೆಲುಗು ಸ್ಟಾರ್ ನಟ ಸಿದ್ದಾರ್ಥ್ ಹಾಗೂ ಸಮಂತ ಕೆಲವು ವರ್ಷ ಒಟ್ಟಿಗೇ ಕಾಣಿಸಿಕೊಂಡು ನಂತರ ದೂರವಾದರು. ಈ ಸಮಯದಲ್ಲಿ ನಟ ಸಿದ್ಧಾರ್ಥ್ ಗೆ ಹತ್ತಿರವಾಗಿದ್ದು ದೀಪಾ ಸನ್ನಿಧಿ. ಆದರೆ ಇವರ ರಿಲೇಶನ್ ಶಿಪ್ ಕೂಡ ಬಹಳ ಕಾಲ ಉಳಿಯುವುದಿಲ್ಲ. ಇದಾದ ಬಳಿಕ ತೆರೆಯ ಹಿಂದೆ ಸರಿದರು ನಟಿ ದೀಪಾ ಸನ್ನಿಧಿ. ಇನ್ನು ಕನ್ನಡದಲ್ಲಿ ನಟನೆಗೆ ಅತೀ ಹೆಚ್ಚಿನ ಸಂಭಾವನೆ ಕೇಳಿದ್ದಕ್ಕೆ ಅವಕಾಶಗಳು ಕಡಿಮೆಯಾದವು ಅಂಥ ಕೂಡ ಹೇಳಲಾಗುತ್ತದೆ.