ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಚಿತ್ರ ಡಿ 56 ಸಿನಿಮಾದ ಟೈಟಲ್ ಲಾಂಚ್ ಇನ್ನೂ ಕೂಡ ಆಗಿಲ್ಲ ಆದರೆ ಅವರ 56ನೇ ಸಿನಿಮಾಗೆ ನಾಯಕಿಯಾಗಿ ಯಾರು ಬರುತ್ತಾರೆ ಎಂದು ಮೊನ್ನೆಯಿಂದ ಚರ್ಚೆಯಾಗುತ್ತಿತ್ತು. ಈ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದು, ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ಡಿ ಬಾಸ್ ಅವರಿಗೆ ಯಾರು ನಟಿಯಾಗಿ ತೆರೆಯ ಮೇಲೆ ಅವರ ಮುಂದಿನ ಚಿತ್ರದಲಿ ಕಾಣಿಸಿಕೊಳ್ಳುತ್ತಾರೆ ಎಂದು ಅವರ ಅಭಿಮಾನಿಗಳು ಹೆಚ್ಚಾಗಿ ತಲೆಕೆಡಿಸಿಕೊಂಡಿದ್ದರು. ಇಂದು ವರಮಹಾಲಕ್ಷ್ಮಿ ಪೂಜೆ ಪ್ರಯುಕ್ತ ಅವರ ಮುಂದಿನ ಚಿತ್ರ ಕ್ರಾಂತಿ ಸಿನಿಮಾದ ಒಂದು ಪೋಸ್ಟರ್ ನೋಡಿ ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ ಎನ್ನಬಹುದು.
ನಟ ದರ್ಶನ್ ಅವರ ಮುಂದಿನ ಚಿತ್ರಕ್ಕೆ ಯಾರು ನಟಿ ಎಂಬುದಾಗಿ ಚರ್ಚೆ ನಡೆದಿದ್ದು, ಕನ್ನಡದ ನಗುಮುಖದ ಚೆಲುವೆ ಡಾಶಿಂಗ್ ಸ್ಟಾರ್ ನಟಿ ಮಾಲಾಶ್ರೀ ಅವರ ಮಗಳು ಎಂಬುದಾಗಿ ತಿಳಿದು ಬಂದಿದೆ. ಕನಸಿನ ರಾಣಿಯಾಗಿದ್ದ ನಟಿ ಮಾಲಾಶ್ರೀ ಅವರ ಮಗಳ ಹೆಸರು ಅನನ್ಯ ರಾಮು. ಇದೀಗ ದರ್ಶನ್ ಅವರ ಸಿನಿಮಾದಲ್ಲಿ ಮೊಟ್ಟಮೊದಲ ಸಿನಿಮಾಗೆ ನಾಯಕಿಯಾಗಿ ಅನನ್ಯ ರಾಮು ಅವರು ಆಯ್ಕೆ ಆಗಿದ್ದು ಅವರಿಗೂ ಖುಷಿ ತಂದಿದೇಯಂತೆ. ಹೌದು, ಚಿತ್ರರಂಗಕ್ಕೆ ಇವರನ್ನು ರಾಧನ ರಾಮ್ ಎನ್ನುವ ಹೆಸರಿನ ಮೂಲಕ ಪರಿಚಯ ಮಾಡಿಕೊಡಲಾಗಿದೆ. ಇದರ ಬಗ್ಗೆ ದರ್ಶನ್ ಅವರು ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. ಹೌದು ‘ಎಲ್ಲರಿಗೂ ನಮಸ್ಕಾರ, ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು… ಎಂದು ಅವರ ಮುಂದಿನ 56ನೇ ಸಿನಿಮಾ ಬಗ್ಗೆಯೇ ಮಾತನಾಡಿದರು.ಈಗಲೇ ಏನನ್ನ ಹೇಳಲು ಆಗುವುದಿಲ್ಲ,
ನಮ್ಮ ಡಿ56 ಚಿತ್ರದ ಸಿನಿಮಾದ ಟೈಟಲ್ ಇಷ್ಟರಲ್ಲೇ ಹೇಳುತ್ತೇವೆ ಎಂದರು. ಹಾಗೆ ಮಾಲಾಶ್ರೀ ಅವರ ಮಗಳು ನಿಮಗೆ ನಾಯಕಿಯಾಗಿರುವ ವಿಚಾರದ ಬಗ್ಗೆ ಏನು ಹೇಳುತ್ತೀರಿ ಎಂದಾಗ, ಮಾಲಾಶ್ರೀ ಅವರು ತುಂಬಾ ದೊಡ್ಡವರು, ಅಂತ ನಟಿಯ ಬಗ್ಗೆ ನಾವು ಮಾತನಾಡಲು ನಮಗೆ ಯೋಗ್ಯತೆ ಇದೆ ಏನಮ್ಮ, ಅವರು ಎಂತಹ ದೊಡ್ಡ ನಟಿ, ಇನ್ನೂ ಅವರ ಮಗಳು ಕೇಳಬೇಕಾ, ಇರಲಿ ಹೊಸಬರು ಚಿತ್ರ ರಂಗಕ್ಕೆ ಬರಬೇಕು ಎಂದು ನಗೆಯ ಬೀರಿದರು. ಅವರಿಗೆ ಏನಾದರೂ ಆಲ್ ದಿ ಬೆಸ್ಟ್ ಹೇಳಲು ಬಯಸುತ್ತೀರಾ ಎಂದಾಗ ದರ್ಶನ್ ಅವರು, ಅವರೇ ಎಲ್ಲಾ ಇಗಾಗ್ಲೇ ಪ್ರಿಪೇರ್ ಆಗಿ ಬಂದಿದ್ದಾರೆ ಎಂದರು. ನಟ ದರ್ಶನ್ ಅವರ ಮುಂದಿನ ಚಿತ್ರಕ್ಕೆ ಮತ್ತು ಅವರ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ, ನಟಿಯಾಗಿ ಬೆಳ್ಳಿ ತೆರೆಗೆ ಕಾಲಿಡುತ್ತಿರುವ ಮಾಲಾಶ್ರೀ ಪುತ್ರಿಗೂ ಸಹ ಶುಭಕೋರಿ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು..
ದರ್ಶನ್ ಅವರ 55ನೇ ಸಿನಿಮಾ ಕ್ರಾಂತಿ ಸಿನಿಮಾದ ಸಂಪೂರ್ಣ ಚಿತ್ರಕರಣ ಈಗಾಗಲೇ ಮುಕ್ತಾಯವಾಗಿದ್ದು ಡಬ್ಬಿಂಗ್ ಕೆಲಸ ನಡೆಯುತ್ತಿದೆ ಇದರ ಬೆನ್ನೆಲು ಅಭಿಮಾನಿಗಳಿಗೆ ದರ್ಶನ್ ಅವರು ಮತ್ತೊಂದು ಸಂತಸದ ಸಿದ್ದಿ ಹೇಳಿದ್ದಾರೆ. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 56ನೇ ಸಿನಿಮಾಗೆ ನಟಿ ಮಾಲಾಶ್ರೀ ಅವರ ಮಗಳು ಹೀರೋಯಿನ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ ಎಂಬ ವದಂತಿಗಳು ಕೇಳಿ ಬರುತ್ತಿದೆ.
ಇಂದು ಕನಕಪುರ ರಸ್ತೆಯಲ್ಲಿ ಅದ್ದೂರಿ ಮುಹೂರ್ತವನ್ನು ಕೂಡ ಫಿಕ್ಸ್ ಮಾಡುವುದಾಗಿ ಹೇಳಿಕೊಂಡಿದ್ದಾರೆ ತರುಣ್ ಸುಧೀರ್ ಅವರು ನಿರ್ಮಾಣ ಮಾಡಲಿರುವಂತಹ ದರ್ಶನ್ ಅವರ 56ನೇ ಸಿನಿಮಾಗೆ ರಾಕ್ ಲೈನ್ ವೆಂಕಟೇಶ್ ಅವರು ಬಂಡವಾಳವನ್ನು ಹೂಡಿಕೆ ಮಾಡಲಿದ್ದಾರೆ. ಆದರೆ ದರ್ಶನ್ ಅವರ ಐವತ್ತಾರನೇ ಸಿನಿಮಾಗೆ ಯಾವ ಹೆಸರು ಎಂಬುದನ್ನು ಎಲ್ಲಿಯೂ ಕೂಡ ಇನ್ನು ರಿವೀಲ್ ಮಾಡಿಲ್ಲ
ಕೇವಲ ಹೆಸರನ್ನು ಮಾತ್ರವಲ್ಲದೆ ಈ ಒಂದು ಸಿನಿಮಾ ಯಾವ ರೀತಿಯ ಕಥ ಸಂಕಲವನ್ನು ಒಳಗೊಂಡಿದೆ ಹಾಗೂ ಈ ಚಿತ್ರದ ನಾಯಕ ನಟಿ ಯಾರು ಎಂಬ ಯಾವ ವಿಚಾರವನ್ನು ಕೂಡ ಚಿತ್ರತಂಡ ರಿವಿಲ್ ಮಾಡಿಲ್ಲ. ಆದರೆ ದರ್ಶನ ಅವರ 56ನೇ ಸಿನಿಮಾವನ್ನು ನಿರ್ದೇಶಕ ತರುಣ್ ಸುಧೀರ್ ಅವರು ಮಾಡಲಿದ್ದಾರೆ ಹಾಗೂ ಈ ಸಿನಿಮಾಗೆ ರಾಕ್ ಲೈನ್ ವೆಂಕಟೇಶ್ ಅವರು ಬಂಡವಾಳವನ್ನು ಹೂಡಿಕೆ ಮಾಡಲಿದ್ದಾರೆ ಎಂಬ ವಿಚಾರ ರಿವೀಲ್ ಮಾಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಪಟ್ಟಂತಹ ಪೋಸ್ಟರ್ ಒಂದನ್ನು ಸ್ವತಃ ದರ್ಶನವರೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕಾಂತಿ ಸಿನಿಮಾದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ತದನಂತರ 56ನೇ ಸಿನಿಮಾದ ಕುರಿತಾಗಿಯೂ ಕೂಡ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈ ವಿಚಾರವನ್ನು ಕೇಳುತ್ತಿದ್ದ ಹಾಗೆ ದರ್ಶನ್ ಅಭಿಮಾನಿಗಳಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ. ಇನ್ನು ದರ್ಶನವರ ಈ ಹೊಸ ಸಿನಿಮಾಗೆ ನಾಯಕ ನಟಿಯಾಗಿ ಯಾರು ಬರಬಹುದು ಎಂಬ ಕುತೂಹಲ ಸಾಕಷ್ಟ ಜನರಿಗೆ ಇದೆ ಏಕೆಂದರೆ ದರ್ಶನ್ ಅವರ ಜೊತೆಗೆ ನಟನೆ ಮಾಡಿದ ಈ ವರೆಗಿನ ಎಲ್ಲಾ ಹೀರೋಯಿನ್ ಗಳು ಕೂಡ ಉತ್ತಮ ಹೆಸರು ಮತ್ತು ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ.
ಆದರೆ ದರ್ಶನ್ ಅವರ ಈ ಹೊಸ ಸಿನಿಮಾಗೆ ಈಗಾಗಲೇ ನಟಿಸಿರುವಂತಹ ನಟಿಯರನ್ನು ಆಯ್ಕೆ ಮಾಡುವುದಿಲ್ಲವಂತೆ. ಇದರ ಜೊತೆಗೆ ಪರಭಾಷೆಯ ನಟಿಯರನ್ನು ದರ್ಶನವರು ಒಪ್ಪುವುದಿಲ್ಲ ಎಂಬ ವದಂತಿಗಳು ಕೂಡ ಕೇಳಿಬರುತ್ತಿದೆ ಹೌದು ದರ್ಶನ್ ಅವರು ಕನ್ನಡ ಸಿನಿಮಾ ರಂಗಕ್ಕೆ ಬರುವಂತಹ ಹೀರೋಯಿನ್ ಗಳು ಕನ್ನಡಕ್ಕೆ ಸಂಬಂಧಪಟ್ಟವರೆ ಆಗಿರಬೇಕು ಬೇರೆ ರಾಜ್ಯ ಅಥವಾ ಬೇರೆ ಸಿನಿಮಾರಂಗದಲ್ಲಿ ನಟಿಸಿರುವಂತಹ ನಾಯಕಿಯರಿಗೆ ಅವಕಾಶವನ್ನು ನೀಡುವುದು ಬೇಡ ಎಂಬ ವಿಚಾರವನ್ನು ಹೇಳಿದ್ದಾರಂತೆ
ಆ ಕಾರಣದಿಂದಾಗಿ ದರ್ಶನವರ 56ನೇ ಸಿನಿಮಾಗೆ ಯಾರು ಹೀರೋಯಿನ್ ಆಗಿ ಆಯ್ಕೆ ಆಗಬಹುದು ಎಂಬುದನ್ನು ತಿಳಿದುಕೊಳ್ಳುವಂತಹ ಕೌತುಕತೆ ಎಲ್ಲರಲ್ಲೂ ಈಗ ಮನೆ ಮಾಡಿದೆ. ದರ್ಶನ್ ಅವರ ಕ್ರಾಂತಿ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ ಆದರೂ ಕೂಡ ಮತ್ತೊಂದು ಸಿನಿಮಾ ಸೆಟ್ಟೇರುತ್ತಿರುವುದು ಇದೀಗ ಮತ್ತೊಂದು ಸಿಹಿ ಸುದ್ದಿ ಅಂತಾನೇ ಹೇಳಬಹುದು.
ಕ್ರಾಂತಿ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಲಿದ್ದು ಕನ್ನಡ, ಹಿಂದಿ, ತಮಿಳು, ತೆಲುಗು ಸೇರಿದಂತೆ ಭಾರತದ ಎಲ್ಲಾ ಭಾಷೆಯಲ್ಲೂ ಕೂಡ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಸಿನಿಮಾ ರಿಲೀಸ್ ಆಗೋದಕ್ಕಿಂತ ಮುಂಚೆ ಮತ್ತೊಂದು ಸಿನಿಮಾ ಮಾಡುತ್ತಿರುವುದರ ಬಗ್ಗೆ ಇದೀಗ ಎಲ್ಲರೂ ಕೂಡ ಮೆಚ್ಚಗೆಯನ್ನು ವ್ಯಕ್ತಪಡಿಸಿದ್ದಾರೆ.