ನಮ್ಮ ಇತಿಹಾಸದಲ್ಲಿ ಎಲ್ಲರಿಗೂ ಗೊತ್ತಿರುವ ಹಾಗೆ ಚಾಣಾಕ್ಯ ನೀತಿಗಳು ಈಗಲೂ ಪ್ರಚಲಿತದಲ್ಲಿದೆ. ಆವಾಗಿನಿಂದ ಚಾಣಾಕ್ಯನನ್ನು ಅತ್ಯಂತ ಮೇಧಾವಿ ಎಂದೇ ಹೇಳಲಾಗುತ್ತದೆ. ಆಚಾರ್ಯ ಚಾಣಕ್ಯನನ್ನು ಕೌಟಿಲ್ಯ, ವಿಷ್ಣು ಗುಪ್ತ ಮತ್ತು ವಾತ್ಸಾಯನ ಎಂದು ಕರೆಯಲಾಗುತ್ತದೆ. ಚಾಣಾಕ್ಯನು ತುಂಬಾ ಕಷ್ಟಕರ ಜೀವನ ಕಳೆದಿದ್ದ. ಒಬ್ಬ ಅನಾಥ ಮಗುವಾದ ಚಾಣಕ್ಯನು ಮಗಧ ಸಾಮ್ರಾಜ್ಯವನ್ನು ಮಾತ್ರವಲ್ಲದೆ ಇಡೀ ಭಾರತವನ್ನು ಪರೋಕ್ಷವಾಗಿ ಹೇಗೆ ಆಳಿದನು ಎನ್ನುವುದನ್ನು ಇತಿಹಾಸದಲ್ದುಕೊಳ್ಳಬಹುದು.
ಚಾಣಕ್ಯನ ಜೀವನವು ಬಾಲ್ಯದಿಂದ ಕೊನೆಯವರೆಗೂ ಹೋರಾಟದಿಂದ ತುಂಬಿತ್ತು.ಅದೇ ರೀತಿ ಆತ ಅನೇಕ ಸ್ಪೂರ್ತಿದಾಯಕ ನೀತಿ ಕಥೆಗಳನ್ನು ಹೇಳಿದ್ದಾನೆ. ಅದರಲ್ಲಿ ನಾವಿವತ್ತು ಕೆಲವು ವಿಷಯಗಳನ್ನು ಹೇಳಲಿದ್ದೇವೆ. ಚಾಣಾಕ್ಯನ ಪ್ರಕಾರ ಹೆತ್ತ ತಂದೆ ತಾಯಿ ಹಾಗೂ ಹೆಂಡತಿಯೂ ಶತ್ರುವಾಗಬಲ್ಲರು. ಹೌದು, ಒಬ್ಬ ತಂದೆ ತನ್ನ ಮಕ್ಕಳಿಗೋಸ್ಕರ ಸಾಲ ಸೂಲ ಮಾಡುತ್ತಾನೆ. ಆತನ ಉದ್ದೇಶ ಮಕ್ಕಳನ್ನು ಚೆನ್ನಾಗಿ ಬೆಳೆಸಬೇಕು, ಅವರಿಗೆ ಯಾವುದೇ ಕೊರತೆ ಉಂಟಾಗಬಾರದು ಎಂದು ಆದರೆ ಕೊನೆಗೆ ತನ್ನ ಸಾಲದ ಹೊರೆಯನ್ನು ಮಗನ ಮೇಲೆ ಹಾಕುತ್ತಾನೆ.
ಆಗ ತಂದೆಯೇ ಮಗನಿಗೆ ಶತ್ರುವಾದಂತೆ. ಯಾಕಂದರೆ ಅದು ಅವನಿಗೂ ಭಾರವಾಗುತ್ತದೆ. ಅದೇ ರೀತಿ ಒಬ್ನ ತಾಯಿಯೂ ಮಕ್ಕಳಿಗೆ ಶತ್ರುವಾಗುತ್ತಾಳೆ. ಇಬ್ಬರು ಮಕ್ಕಳಿರುವ ತಾಯಿ ಕೆಲವೊಮ್ಮೆ ತನ್ನ ಮೊದಲ ಮಗುವನ್ನು ನಿರ್ಲ್ಯಕ್ಷ್ಯ ಮಾಡಲು ಶುರು ಮಾಡುತ್ತಾಳೆ.ತನ್ನ ಎರಡನೆ ಮಗುವನ್ನೇ ಅತಿಯಾಗಿ ಪ್ರೀತಿಸಲು ಆರಂಭಿಸಿ ಮೊದಲ ಮಗುವಿನ ಮೇಲೆ ಗಮನ ಕೊಡೋದನ್ನು ನಿಲ್ಲಿಸಿ ಬಿಡುತ್ತಾಳೆ. ಆಗ ತಾಯಿಯೇ ಮೊದಲ ಮಗುವಿಗೆ ಶತ್ರುವಾಗುತ್ತಾಳೆ.
ತಾಯಿಯಾದವಳು ತನ್ನ ಎಲ್ಲಾ ಮಕ್ಕಳನ್ನು ಸಮನಾಗಿ ಪ್ರೀತಿಸಬೇಕು. ಇನ್ನು ಒಬ್ಬನ ಪತ್ನಿಯು ತುಂಬಾ ಸುಂದರಳಾಗಿದ್ದರೆ ಆಕೆಯೂ ತನ್ನ ಪತಿಗೆ ಶತ್ರುವಾಗುತ್ತಾಳೆ. ಸುಂದರವಾದ ಪತ್ನಿಯನ್ನು ಹೊಂದಿದ್ದು ಪತಿಯು ಆಕೆಗೆ ಬೇಕಾದ ಪ್ರೀತಿ ಸುಖ ಕೊಡುವುದರಲ್ಲಿ ಅಸಮರ್ಥ ನಾಗಿದ್ದರೆ ಆಗ ಹೆಣ್ಣು ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಹೀಗಾಗಿ ಪತಿಯೇ ತನ್ನ ಪತ್ನಿಯನ್ನು ಕೆಟ್ಟ ಹಾದಿ ತುಳಿಯಲು ಪ್ರೇರಣೆ ನೀಡಿದಂತೆ. ಇನ್ನು ಯಾವ ಹೆತ್ತ ತಂದೆ ತಾಯಿ ಯಾರು ತನ್ನ.
ಮಕ್ಕಳಿಗೆ ಬೇಕಾದ ವಿದ್ಯಾಭ್ಯಾಸ ಕೊಡದೆ ಅವರನ್ನು ಮೂರ್ಖರನ್ನಾಗಿ ಮಾಡುತ್ತಾರೋ ಅವರು ಶತ್ರುವಾಗುತ್ತಾರೆ. ಹೆತ್ತವರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಯಾವಾಗಲೂ ಪ್ರಯತ್ನಿಸಬೇಕು ಅದು ಬಿಟ್ಟು ಅವರನ್ನು ಕಡೆಗಣಿಸಿದರೆ ಅದು ಕೂಡ ಶತ್ರುತ್ವ ಬೆಳೆಸಿದಂತೆಯೇ. ಹೀಗಾಗಿ ಈ ನಾಲ್ಕು ರೀತಿಯ ಗುಣಗಳಿರುವವರು ತಮ್ಮವರಿಗೇ ಶತ್ರುಗಳಾಗುತ್ತಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.