
ಬಹಿರಂಗವಾಗಿ ಹಣಕ್ಕೊಸ್ಕರ ಇವರನ್ನು ನೀವು ಮದುವೆಯಾದ್ರ ಅಂತ ಟಿವಿ ಆ್ಯಂಕರ್ ಕೇಳಿದ ಪ್ರಶ್ನೆಗೆ ಮಹಾಲಕ್ಷ್ಮಿ ಕೊಟ್ಟ ಉತ್ತರ ಕೇಳಿ ಎಲ್ಲರೂ ಶಾಕ್..ಕಳೆದ ಕೆಲವು ದಿನಗಳಿಂದ ದಕ್ಷಿಣ ಭಾರತದಾದ್ಯಂತ ಮದುವೆ ವಿಷಯದ ಸಲುವಾಗಿ ಸುದ್ದಿ ಆಗಿರುವ ಸೆಲೆಬ್ರೆಟಿಗಳು ಎಂದರೆ ಅದು ತಮಿಳಿನ ಸೀರಿಯಲ್ ನಟಿ ಹಾಗೂ ನಿರೂಪಕಿ ಆಗಿರುವ ಮಹಾಲಕ್ಷ್ಮಿ ಮತ್ತು ಮೋಟಿವೇಷನಲ್ ಸ್ಪೀಕರ್, ಯೂಟ್ಯೂಬರ್ ಹಾಗೂ ತಮಿಳಿನ ಡೈರೆಕ್ಟರ್ ಮತ್ತು ಪ್ರೊಡ್ಯೂಸರ್ ಆಗಿರುವ ತಮಿಳಿನ ಫ್ಯಾಟ್ ಮ್ಯಾನ್ ಎಂದೇ ಫೇಮಸ್ ಆಗಿರುವ ರವೀದ್ರನ್ ಜೋಡಿ. ಈ ಜೋಡಿ ಮದುವೆ ಬಗ್ಗೆ ತಿಳಿಯುತ್ತಿದ್ದ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ಇವರ ಫೋಟೋವನ್ನು ವೈರಲ್ ಮಾಡಿ ಹಲವು ಜನ ಇವರನ್ನು ಟ್ರೋಲ್ ಮಾಡಿದ್ದಾರೆ. ಎಲ್ಲರಿಗೂ ಇದರಲ್ಲಿ ಆಶ್ಚರ್ಯ ಆಗಿರುವುದು ಅಷ್ಟು ಸುಂದರಿ ಆಗಿರುವ ಹೀರೋಯನ್ ಮಹಾಲಕ್ಷ್ಮಿ ಅವರು ಫ್ಯಾಟ್ ಮ್ಯಾನ್ ರವೀಂದ್ರನ್ ಅವರನ್ನು ಹೇಗೆ ಮದುವೆಯಾದರು ಎಂದು, ಹಾಗಾಗಿ ಈ ವಿಷಯ ಇಟ್ಟುಕೊಂಡು ಎಲ್ಲರೂ ಮನಸ್ಸೋ ಇಚ್ಚೆ ಕಾಮೆಂಟ್ ಮಾಡುತ್ತಿದ್ದಾರೆ.
ಇವರ ಮದುವೆ ಹಾಗೂ ಫೋಟೋಶೂಟ್ ಹಾಗೂ ರವೀಂದ್ರ ಅವರು ಕೊಟ್ಟ ಗಿಫ್ಟ್ ಗಳ ಬಗ್ಗೆ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿ ಸರಣಿಯಲ್ಲಿ ಸುದ್ದಿಗಳು ಪ್ರಸಾರವಾಗುತ್ತಲೇ ಇವೆ. ಕೆಲವೊಮ್ಮೆ ಮಹಾಲಕ್ಷ್ಮಿ ಅವರಿಗೆ ಸ್ಪಷ್ಟನೆ ಕೊಡುವ ಪ್ರಯತ್ನವನ್ನು ಕೂಡ ಮಾಡಿದ್ದಾರೆ ಆದರೂ ಕೂಡ ಇವರ ಮೇಲೆ ಇನ್ನೂ ಕೂಡ ಅದೇ ರೀತಿಯ ಆರೋಪಗಳು ಇವೆ. ಇದರ ನಡುವೆ ತಮಿಳುನಾಡು ಖಾಸಗಿ ವಾಹಿನಿ ಒಂದು ನಟಿ ಮಹಾಲಕ್ಷ್ಮಿ ಹಾಗೂ ಅವರ ಪತಿ ನಿರ್ಮಾಪಕ ಅವರನ್ನು ಇಂಟರ್ವ್ಯೂ ಮಾಡಿದೆ ಅದರಲ್ಲಿ ನಿರೂಪಕಿ ನೇರವಾಗಿ ಮಹಾಲಕ್ಷ್ಮಿ ಅವರನ್ನು ನಿಮ್ಮ ಮೇಲೆ ಈ ರೀತಿ ಆರೋಪಗಳು ಕೇಳಿ ಬರುತ್ತಿವೆ. ಹಾಗಾದರೆ ನೀವು ಹಣಕ್ಕಾಗಿ ಮದುವೆ ಆಗಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಮಹಾಲಕ್ಷ್ಮಿ ಅವರು ನನಗೆ ಅದರ ಅವಶ್ಯಕತೆಯೇ ಇಲ್ಲ ನನ್ನ ತಂದೆ ಫೇಮಸ್ ಫೋಟೋಗ್ರಾಫರ್ ಆಗಿದ್ದಾರೆ, ಬಾಹುಬಲಿ ತ್ರಿಬಲ್ ಆರ್ ಈ ರೀತಿಯ ಅನೇಕ ಫೇಮಸ್ ಫಿಲಂ ಗಳಲ್ಲಿ ಕೆಲಸ ಮಾಡಿ ಹೆಸರುವಾಸಿ ಆಗಿದ್ದಾರೆ.
ನಾನು ಕೂಡ ಈಗಾಗಲೇ ಸಾಕಷ್ಟು ಗಳಿಸಿದ್ದೇನೆ ಇನ್ನೊಬ್ಬರ ದುಡಿಮೆಯ ಮೇಲೆ ಅವಲಂಬಿತ ಆಗುವ ಅವಶ್ಯಕತೆ ನನಗೆ ಇಲ್ಲ. ನನ್ನ ಮಗುವನ್ನು ಸಾಕುವ ಶಕ್ತಿ ನನಗಿದೆ. ಇದೆ ಕಾರಣಕ್ಕೆ ನಾನು ಇನ್ನೂ ಎರಡನೇ ಮದುವೆ ಬಗ್ಗೆ ಯೋಚಿಸಿರಲಿಲ್ಲ ಆದರೆ ರವೀಂದ್ರ ಅವರ ವ್ಯಕ್ತಿತ್ವ ನನಗೆ ಇಷ್ಟವಾಯಿತು. ಇದೇ ರೀತಿ ವ್ಯಕ್ತಿತ್ವ ಇರುವ ವ್ಯಕ್ತಿ ಯಾರೇ ಒಂದು ಅಪ್ರೋಚ್ ಮಾಡಿದ್ದರು ನಾನು ಒಪ್ಪಿಕೊಳ್ಳುತ್ತಿದ್ದೆ ಆದರೆ ಇವರು ನಿರ್ಮಾಪಕರು ಆಗಿರುವುದೇ ಎಲ್ಲರಿಗೂ ಸಮಸ್ಯೆ ಆ ವಿಷಯದಿಂದ ಎಲ್ಲರೂ ನನ್ನ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಯಾರು ಏನೇ ಅಂದರೂ ಕೂಡ ನಾನು ಮನಸಾರೆ ಇಷ್ಟಪಟ್ಟು ಅವರನ್ನು ವಿವಾಹವಾಗಿದ್ದೇನೆ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ಅವರ ಪ್ರತಿ ರವೀಂದ್ರ ಅವರು ಕೂಡ ಅವರ ಜೊತೆಗಿದ್ದು ಅವರ ಪ್ರೀತಿಯನ್ನು ಸಮರ್ಥಿಸಿಕೊಂಡಿದ್ದಾರೆ.
Comments are closed.